ಪ್ರತಿನಿಧಿ ವರದಿ ತಲಕಾಡು
ತಲಕಾಡು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಆರಕ್ಷಕ ಠಾಣೆಯ ಪಿ.ಐ.ಅನೂಪ್ ಮಾದಪ್ಪ ಪಿ. ಮಾತನಾಡಿ, ಮಾದಕ ವಸ್ತುಗಳ ಸೇವೆನೆಯಿಂದ ಆಗುವ ದುಷ್ಪರಿಣಾಮಗಳು, ಮೊಬೈಲ್ ಅಂತರ್ಜಾಲಗಳಿಂದ ಉಂಟಾಗುವ ಅನಾಹುತಗಳು ಸೇರಿದಂತೆ ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮೂಡಿಸಿದರು.
ಮಾದಕ ವಸ್ತುಗಳ ಸೇವನೆ ವಿರುದ್ದ ಕಾಲೇಜು ವಿದ್ಯಾರ್ಥಿಗಳು ಇಲ್ಲಿನ ಮುಖ್ಯರಸ್ತೆಯಲ್ಲಿ ಭಿತ್ತಿ ಪತ್ರ ಬ್ಯಾನರ್ ಹಿಡಿದು ಘೋಷಣೆ ಕೂಗುತ್ತ ಜಾಗೃತಿ ಜಾಥಾ ನಡೆಸಿದರು. ಮೆರವಣಿಗೆಯಲ್ಲಿ ಇಲ್ಲಿನ ಆರಕ್ಷಕ ಠಾಣೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಆರಕ್ಷಕ ಠಾಣೆಯ ಸಿಬ್ಬಂದಿ ಸಿಹಿ ವಿತರಿಸಿದರು.
ಆರಕ್ಷಕ ಠಾಣೆಯಲ್ಲಿ ಮಾದಕ ವಸ್ತುಗಳ ಸೇವನೆ ವಿರೋಧಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು. ಆರಕ್ಷಕ ಸಿಬ್ಬಂದಿಗೆ ಮಾದಕ ವ್ಯಸನ ಮುಕ್ತ ಸಮುದಾಯ ನಿರ್ಮಿಸುವ ಪಣ ತೊಡುವ ಪ್ರತಿಜ್ಞಾ ವಿಧಿಯನ್ನು ಪಿ.ಐ.ಅನುಮಾದಪ್ಪ .ಪಿ ಇಲ್ಲಿನ ಆರಕ್ಷಕ ಸಿಬ್ಬಂದಿಗೆ ಬೋಧಿಸಿದರು.
ಪಿಎಸ್ ಐ ತಿರುಮಲ್ಲೇಶ್, ಶಿವಕುಮಾರ್, ಎಎಸ್ ಐ ಸುರೇಶ್, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಬಿ.ನಾಗರತ್ನ, ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ನರಸಿಂಹಮಾದನಾಯಕ, ಉಪನ್ಯಾಸಕರಾದ ಎಸ್.ಜೆ.ಸುಧೀರ್, ಜಿ.ಆನಂದ್ ಕುಮಾರ್, ಎಸ್.ಪರಶಿವಮೂರ್ತಿ, ಜೆ.ಪರಶಿವಮೂರ್ತಿ, ಎನ್.ಚಂದ್ರಶೇಖರ್, ಎಲ್.ಲೋಕೇಶ್, ವಿ.ಎಮ್.ಮಲ್ಲೇಶ್, ಟಿ.ಎಸ್.ಅನಸೂಯ, ಕೆ.ಟಿ.ಮಾಲಿನಿ, ಹೆಚ್.ಎಸ್.ಅಂಬುಜಾ, ಪಿ.ಚೈತ್ರಶ್ರೀ ಆರಕ್ಷಕ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಚಿತ್ರಶೀರ್ಷಿಕೆ ,1,2 1,2): ತಲಕಾಡಿನಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಪ್ರಯುಕ್ತ ಜಾಗೃತಿ ಜಾಥಾದಲ್ಲಿ, ಇಲ್ಲಿನ ಆರಕ್ಷಕ ಠಾಣೆಯ ಬಳಿಗೆ ಆಗಮಿಸಿದ ಕಾಲೇಜಿನ ವಿದ್ಯಾರ್ಥಿಗಳಿಗೆ ಆರಕ್ಷಕ ಠಾಣೆಯ ಸಿಬ್ಬಂದಿ ಸಿಹಿ ನೀಡಿ ಸ್ವಾಗತಿಸಿದರು. ಪಿಐ, ಅನೂಪ್ ಮಾದಪ್ಪ, ಪಿಎಸ್ ಐ ಶಿವಕುಮಾರ್, ಉಪನ್ಯಾಸಕ ಎಂ.ಜೆ.ಸುಧೀರ್, ನರಸಿಂಹಮಾದನಾಯಕ ಮತ್ತಿತರರು ಇದ್ದರು.