ಹಾಸನ: ಅರ್ಜುನ ಆನೆಗೆ (Elephant Arjuna) ಯಾವುದೇ ಗುಂಡೇಟು ಬಿದ್ದಿಲ್ಲ ಮತ್ತು ಕಾರ್ಯಾಚರಣೆಯಲ್ಲಿಯೂ ಯಾವುದೇ ಲೋಪವಾಗಿಲ್ಲ ಎಂದ ಅರವಳಿಕೆ ತಜ್ಞ ವೈದ್ಯ ರಮೇಶ್ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಡಾ.ರಮೇಶ್, ಕಾರ್ಯಚರಣೆ ವೇಳೆ ಅರ್ಜುನನ ಕಾಲಿಗೆ ಕೂಳೆ ಚುಚ್ಚಿದ್ದರಿಂದ ಗಾಯವಾಗಿತ್ತು. ಕೂಳೆ ಚುಚ್ಚಿರೋದನ್ನು ಅಲ್ಲಿಯೇ ಮಾವುತ ವಿನು ಗಮನಿಸಿದ್ದಾನೆ. ಇಂದು ನಾವು ಸಹ ಅರ್ಜುನನಿಂದಲೇ ಬದುಕಿದ್ದೇವೆ ಎಂದು ರಮೇಶ್ ಕಾರ್ಯಚರಣೆಯ ಮಾಹಿತಿಯನ್ನು ನೀಡಿದ್ದಾರೆ. ನಮ್ಮ ಬಳಿ ಡಬಲ್ ಬ್ಯಾರೆಲ್ ಚೆರ್ರೆ ಕೋವಿ ಇತ್ತು. ಕಾಡಾನೆಗಳನ್ನು ಹೆದರಿ ಲು ಈ ಕೋವಿ ಬಳಸಲಾಗುತ್ತದೆ. ಈ ಚರ್ರೆಯಿಂದ ಆನೆ ಸಾಯುವುದಿಲ್ಲ ಎಂದು ರಮೇಶ್ ತಿಳಿಸಿದ್ದಾರೆ.
ಕಾರ್ಯಚರಣೆಯಂದು ಅರ್ಜುನನ ಮೇಲೆ ನಾನು, ಮಾವುತರಾದ ವಿನು ಹಾಗೂ ಗುಂಡ ಇದ್ದೇವೆ. ಮತ್ತೊಂದು ಪ್ರಶಾಂತ್ ಆನೆ ಮೇಲೆ DRFO ರಂಜನ್ ಇದ್ರು. ವಿಕ್ರಾಂತ್ ಹೆಸರಿನ ಒಂದು ಮತ್ತೊಂದು ಸಲಗವನ್ನು ಸೆರೆ ಹಿಡಿಯುವ ಗುರಿಯನ್ನು ನಮಗೆ ನೀಡಲಾಗಿತ್ತು.
ಆನೆ ಗುಂಪು ಕಾಣಿಸಿತು
ವಿಕ್ರಾಂತ್ ಎದುರಾದ್ರೆ ನಾನು, ಮತ್ತೊಂದು ಸಲಗ ಎದುರಾದ್ರೆ ರಂಜನ್ ಅರವಳಿಕೆ ಮದ್ದು ನೀಡಬೇಕೆಂದು ನಿಗದಿಯಾಗಿತ್ತು. ನಾವು ಕಾಡು ಪ್ರವೇಶಿಸಿ ಸುಮಾರು 400 ಮೀಟರ್ ಒಳಗೆ ಹೋದಾಗ ಆನೆ ಗುಂಪು ಕಾಣಿಸಿತು. ಆದ್ರೆ ಆ ಗುಂಪಿನಲ್ಲಿ ವಿಕ್ರಾಂತ್ ಆನೆ ಇರಲಿಲ್ಲ.
ಆನೆ ಮುಖ ಕಾಣಲಿಲ್ಲ
ಕಾಡಿನಲ್ಲಿ ಲಂಟಾನ ಹೆಚ್ಚಾಗಿ ಬೆಳೆದಿರೋ ಕಾರಣ ನಮಗೆ ಆನೆ ಮುಖ ಸಂಪೂರ್ಣವಾಗಿ ಕಾಣಲಿಲ್ಲ. ನಮಗೆ ಆನೆಯ ಹಿಂಭಾಗ ಸ್ವಲ್ಪವೇ ಕಾಣಿಸಿತ್ತು. ನಾವು ಗುರಿ ಮಾಡಿರೋ ಆನೆ ಇದೆನಾ? ಹೆಣ್ಣಾನೆ ಅಂತ ಖಾತ್ರಿ ಮಾಡಿಕೊಳ್ಳಬೇಕಿತ್ತು ಎಂದು ರಮೇಶ್ ಹೇಳಿದ್ದಾರೆ.