ತಹಸೀಲ್ಧಾರ್ ಸಿ.ಎಸ್.ಪೂರ್ಣಿಮ ಹೇಳಿಕೆ
ಪ್ರತಿನಿಧಿ ವರದಿ ಕೆ.ಆರ್.ನಗರ
ಸಾಮಾನ್ಯ ವ್ಯಕ್ತಿಗಳಿಂದ ಅಸಾಮಾನ್ಯ ವ್ಯಕ್ತಿತ್ವಗಳನ್ನು ಅಳವಡಿಸಿಕೊಂಡು ದೀಮಂತ ವ್ಯಕ್ತಿಗಳಾಗಿ ರಾಷ್ಟ್ರವೇ ಕೊಂಡಾಡುವಂತಹ ಮಹಾನಾಯಕರಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಮ್ ಅವರು ಕೂಡ ಅಗ್ರ ಗಣ್ಯರಾಗಿದ್ದಾರೆ ಎಂದು ತಹಸಿಲ್ಧಾರ್ ಸಿ.ಎಸ್.ಪೂರ್ಣಿಮ ಹೇಳಿದರು.
ಪಟ್ಟಣದ ಪುರಸಭೆ ಬಳಿ ಇರುವ ಡಾ.ಬಾಬು ಜಗಜೀವನ ರಾಮ್ ಪ್ರತಿಮೆ ಬಳಿ ತಾಲೂಕು ಆಡಳಿತ ಮತ್ತು ಮಾದಿಗ ಹಾಗೂ ದಲಿತ ಸಂಘಟನೆಗಳ ವತಿಯಿಂದ ಶುಕ್ರವಾರ ಆಯೋಜಿಸಿದ್ದ 117ನೇ ಜನ್ಮ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾರು ಕೂಡ ಹುಟ್ಟಿನಿಂದಲೇ ಪ್ರಖ್ಯಾತರಾಗಿರುವುದಿಲ್ಲಾ ತಾವು ನಡೆದು ಬಂದ ದಾರಿ, ಆದರ್ಶಗಳು ಮತ್ತು ತತ್ವ ಸಿದ್ದಾಂತಗಳಿAದ ಮಹಾತ್ಮರಾಗುತ್ತಾರೆ ಎಂದು ತಿಳಿಸಿದರು.
ಎಲ್ಲಾ ಮಹಾತ್ಮರ ಜಯಂತಿಗಳನ್ನ ನಾವು ಆಚರಿಸಬೇಕಾದ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾದದ್ದು ಅವರು ಸಮಾಜಕ್ಕೆ ನೀಡಿದ ಕೊಡುಗೆ ಅವರ ಸಾಧನೆಗಳ ಬಗ್ಗೆ. ನಾಲ್ಕನೇ ಉಪ ಪ್ರಧಾನಿಗಳಾಗಿದ್ದ ಅವರು ರಕ್ಷಣಾ ಸಚಿವರಾಗಿ, ದೇಶದ ಸೈನ್ಯದಲ್ಲಿ ಆಧುನಿಕತೆ, ತಾತ್ರಿಕತೆಯನ್ನು ಅಳವಡಿಸಿಕೊಳ್ಳುವ ಮೂಲಕ ಸೈನಿಕರಲ್ಲಿ ದೈರ್ಯ ತುಂಬಿ ಇಂಡೋ ಪಾಕಿಸ್ತಾನದ ಯುದ್ದವನ್ನು ಜಯಿಸಲು ಕಾರಣ ಕರ್ತರಾಗಿದ್ದಾರೆ ಎಂದರು.
ಕಾರ್ಮಿಕ ಸಚಿವರಾಗಿದ್ದಾಗ ಕಾರ್ಮಿಕರಲ್ಲಿದ್ದ ಅಸಮಾನತೆಯನ್ನು ತೊಡೆದು ಹಾಕಲು ಹಲವಾರು ಯೋಜನೆಗಳು ಮತ್ತು ಕಾನೂನುಗಳನ್ನು ತರುವ ಮೂಲಕ ಎಲ್ಲರು ಸಮಾನರು ಎಂಬ ಸಮಾನತೆಯನ್ನು ಮೂಡಿಸುತ್ತಾರೆ. ಇಂತಹ ಅನೇಕ ಹತ್ತಾರು ಯೋಜನೆಗಳನ್ನು ತಂದು ದಕ್ಷತೆ ಮತ್ತು ಪ್ರಮಾಣಿಕವಾಗಿ ಆಡಳಿತ ಮಾಡಿದ ಬಾಬೂಜಿ ಅವರು ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಲಿದ್ದಾರೆ ಎಂದು ಹೇಳಿದರು.
ಜಯಂತಿ ಆಚರಣೆಗೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಸರಳವಾಗಿ ಆಚರಿಸಿದರು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ. ಇಂತಹ ಮಹನೀಯರು ನಡೆದು ಬಂದ ದಾರಿ ಸಮಾಜಕ್ಕೆ ಅವರು ನೀಡಿದ ಕೊಡಗುಗೆಳು, ಮಾರ್ಗದರ್ಶನಗಳನ್ನು ನಾವೆಲ್ಲಾ ಅರಿತು ನಮ್ಮಗಳ ಜೀವನದಲ್ಲಿ ಕಿಂಚಿತ್ತಾದರು ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸಿ ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಕೋರಿದರು.
ಕಾರ್ಯಕ್ರಮವನ್ನು ಕುರಿತು ತಾಲೂಕು ಪಂಚಾಯಿತಿ ಇಒ ಜಿ.ಕೆ.ಹರೀಶ್, ತಾಲೂಕು ಆದಿಜಾಂಬವ ಸಂಘದ ಅಧ್ಯಕ್ಷ ಎಂ.ಲೋಕೇಶ್, ನಿವೃತ್ತ ಪ್ರಾಂಶುಪಾಲ ಡಾ.ಕೃಷ್ಣ ಮಾತನಾಡಿದರು. ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಎಂ.ಹೆಚ್.ಸ್ವಾಮಿ, ಪುರಸಭಾ ಮಾಜಿ ಅಧ್ಯಕ್ಷ ಡಿ.ಕಾಂತರಾಜ್, ಸದಸ್ಯರಾದ ನಟರಾಜು, ಮಿಕ್ಸರ್ಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ನಗರಾಧ್ಯಕ್ಷ ಎಂ.ಜೆ.ರಮೇಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹೇಶ್, ಎಂಎಸ್ಎಸ್ ತಾಲೂಕು ಅಧ್ಯಕ್ಷ ಮಧುವನಹಳ್ಳಿ ರವಿಕುಮಾರ್, ಪ್ರಧಾನಕಾರ್ಯದರ್ಶಿ ಬಿ.ಹೆಚ್.ಕುಮಾರ್, ಸಂಘಟನಾ ಕಾರ್ಯದರ್ಶಿ ಕಂಚುಗಾರಕೊಪ್ಪಲುಸ್ವಾಮಿ, ಅಖಿಲ ಭಾರತ ಜೈ ಭೀಮ್ ದಲಿತ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಪರಷುರಾಮ್, ಸಿದ್ದಾಪುರರಮೇಶ್, ಮಾರಗೌಡನಹಳ್ಳಿರಾಜೇಶ್, ರವಿಪೂಜಾರಿ, ರಾಮಚಾರಿ, ಎಂ.ಎಸ್.ಮಹದೇವ್, ಸಿದ್ದರಾಜು, ವಜ್ರೇಶ್, ಶಾಂತಮ್ಮರಾಜಯ್ಯ, ಪುರಸಭಾ ಮುಖ್ಯಾಧಿಕಾರಿ ಹೇಮಂತ್ ದೊಲ್ಲೆ, ಟಿಎಸ್ಡಬ್ಲೂö್ಯ ಎಸ್.ಎಂ.ಅಶೋಕ್ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.
05 ಕೆಆರ್ಎನ್-1:- ಕೆ.ಆರ್.ನಗರದ ಡಾ.ಬಾಬು ಜಗಜೀವನರಾಮ್ ಪ್ರತಿಮೆಗೆ ಮಾರ್ಲಾಪಣೆ ಮಾಡುವ ಮೂಲಕ 117ನೇ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ತಹಸಿಲ್ಧಾರ್ ಸಿ.ಎಸ್.ಪೂರ್ಣಿಮಾ, ಎಂ.ಲೋಕೇಶ್ ಎಂ.ಎಸ್.ಮಹದೇವ್, ಮಧುವನಹಳ್ಳಿ ರವಿಕುಮಾರ್, ಡಾ.ಕೃಷ್ಣ, ಚಂದ್ರಶೇಖರ್ ಇನ್ನಿತರರು ಇದ್ದರು.
ಪ್ರತಿನಿಧಿ ವರದಿ.
ಕೆ.ಆರ್.ನಗರ ಏ,5:-
೦5 ಕೆಆರ್ಎನ್-2:- ಕೆ.ಆರ್.ನಗರದ ಡಾ.ಬಾಬು ಜಗಜೀವನ ರಾಮ್ 117ನೇ ಜನ್ಮ ಜಯಂತಿ ಅಂಗವಾಗಿ ಬಾಬೂಜಿ ಪ್ರತಿಮೆಗೆ ಶಾಸಕ ಡಿ.ರವಿಶಂಕರ್ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಕೋಳಿಪ್ರಕಾಶ್, ನಟರಾಜು, ಮಿಕ್ಸರ್ ಶಂಕರ್, ಬ್ಲಾಂಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಎಂಎಸ್ಎಸ್ ತಾಲೂಕು ಅಧ್ಯಕ್ಷ ಮಧುವನಹಳ್ಳಿ ರವಿಕುಮಾರ್, ನಿವೃತ್ತ ಪ್ರಾಂಶುಪಾಲ ಡಾ.ಕೃಷ್ಣ ಇನ್ನಿತರರು ಇದ್ದರು.