ಹೆಚ್.ಡಿ.ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ವಿಚಾರವಾಗಿ ಮಾತನಾಡಿದ ಜೆಡಿಎಸ್ ಶಾಸಕ ಬಂಡೆಪ್ಪ ಖಾಶೆಂಪುರ್, ಕುಮಾರಸ್ವಾಮಿ ರಾಜ್ಯಾಧ್ಯಕ್ಷರಾಗಿರೋದು ಸಂಘಟನೆಗೆ ಸಹಾಯ ಆಗುತ್ತದೆ. ಇವತ್ತು ನಮಗೆ ಅನಿವಾರ್ಯತೆ ಇದೆ. ಅದೃಷ್ಟ ಯಾವಾಗ ಯಾರ ಬಾಗಿಲಿಗೆ ಹೋಗಿ ನಿಲ್ಲುತ್ತೋ ರಾಜಕಾರಣದಲ್ಲಿ ಗೊತ್ತಿಲ್ಲ. ಕಾದು ನೋಡೋಣ. ಕುಟುಂಬ ರಾಜಕಾರಣದ ಬಗ್ಗೆ ಮಾತಾಡೋಕೆ ಕಾಂಗ್ರೆಸ್ಗೆ ಯಾವುದೇ ನೈತಿಕತೆ ಇಲ್ಲ, ನಮ್ಮ ಪಕ್ಷ ಬಹಳ ಸದೃಢವಾಗಿದೆ. ಸರ್ಕಾರದಲ್ಲಿ ಬಿಜೆಪಿ ಕಾಂಗ್ರೆಸ್ನಲ್ಲಿರೋ ಅರ್ಧಕ್ಕಿಂತ ಹೆಚ್ಚಿನವರು ನಮ್ಮವರೇ ಎಂದರು.