ಬೆಂಗಳೂರು : ರೆಂಬೆ ಕಡಿಯಲು ಅನುಮತಿ ಪಡೆದು ಇಡೀ ಮರವನ್ನೇ ಬಿಬಿಎಂಪಿಯ ಸಿಬ್ಬಂದಿ ಕಡೆದಿರುವಂತಹ ಘಟನೆ ಎಂ.ಎಸ್.ಬಿಲ್ಡಿಂಗ್ ಸಮೀಪದಲ್ಲಿ ನಡೆದಿದೆ. ಟ್ರಾನ್ಸ್ ಫಾರ್ಮರ್ ಹಾಕೋಕೆ ಅಂತಾ ನೆಪವೊಡ್ಡಿ ಇಡೀ ಮರವನ್ನೇ ಕತ್ತರಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಸದ್ಯ ಬಿಬಿಎಂಪಿಯಿಂದ ಬರೀ ರೆಂಬೆ ಕತ್ತರಿಸಲು ಮಾತ್ರ ಅನುಮತಿ ನೀಡಲಾಗಿದೆ. ಆದರೆ ರೆಂಬೆ ಕತ್ತರಿಸಲು ಅನುಮತಿ ಪಡೆದ ಸಿಬ್ಬಂದಿಗಳು ಮರ ಕಡಿಯುತ್ತಿದ್ದಾರೆ. ಕ್ಯಾಮರಾ ಕಂಡೊಡನೆ ಸ್ಥಳದಿಂದ ಬೆಸ್ಕಾಂ, ಬಿಬಿಎಂಪಿ ಸಿಬ್ಬಂದಿಗಳು ಕಾಲ್ಕಿತ್ತಿದ್ದಾರೆ.
ಜೆಸಿಬಿ ಮೂಲಕ ಬುಡಸಮೇತ ಸಿಬ್ಬಂದಿ ಮರ ಉರುಳಿಸಿದ್ದಾರೆ. ಮಿಸ್ ಆಗಿ ಮರ ಬೀಳ್ತು ಅಂತಾ ಸಬೂಬು ನೀಡುತ್ತಾರೆ. ಎಂ.ಎಸ್.ಬಿಲ್ಡಿಂಗ್ ಪಕ್ಕದಲ್ಲಿರುವ ಖಾಸಗಿ ಜಾಗದಲ್ಲಿದ್ದ ಕಾಲೇಜು ನಿರ್ಮಾಣಕ್ಕೆ ಕಾಮಗಾರಿ ನಡೆಯುತ್ತಿದ್ದು, ಜಾಗದವರ ಜೊತೆ ಸೇರಿ ಮರ ತೆರವು ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ.