ಪ್ರತಿನಿಧಿ ವರದಿ ಕೊಳ್ಳೇಗಾಲ
ಪಟ್ಟಣದ ಮುಡಿಗುಂಡ ಬಳಿ ಇತ್ತೀಚೆಗೆ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮೋಟಾರ್ ಬೈಕ್ ಸವಾರ ಬುಧವಾರ ಮೃತಪಟ್ಟಿದ್ದಾರೆ.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಮಂಗಿಪಚ್ಚನಹುಂಡಿ ಗ್ರಾಮದ ನಿವಾಸಿ ಚಿಕ್ಕಮಲ್ಲೇಗೌಡ(56) ಮೃತ ಸವಾರ. ಈತ ಆ.15ರಂದು ತನ್ನ ಸ್ವಗ್ರಾಮದಿಂದ ಪಟ್ಟಣದಲ್ಲಿರುವ ಬಸ್ತೀಪುರ ಬಡಾವಣೆಯ ಮಗಳ ಮನೆಗೆ ತನ್ನ ಟಿವಿಎಸ್ ಏಕ್ಸೆಲ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಮುಡಿಗುಂಡ ಬಡಾವಣೆ ಬಳಿ ಎದುರಿಗೆ ಬಂದ ಖಾಸಗಿ ಬಸ್ ಮುಖಾಮುಖಿ ಡಿಕ್ಕಿ ಹೊಡೆಯಿತು. ಪರಿಣಾಮ ತೀವ್ರಗಾಯಗೊಂಡು ಸವಾರನನ್ನು ಮೈಸೂರಿನ ಮೇಟಗಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಬುಧವಾರ ಆತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಸಂಬಂಧ ಮೃತನ ಸಹೋದರಿಯ ಪುತ್ರ ಮಂಜುನಾಥ್ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಎಸ್ಐ ರಂಗರಾಜು ಪ್ರಕರಣ ದಾಖಲಿಸಿಕೊಂಡಿದ್ದಾರೆ.