ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜ್ ಇಂದು ಕ್ಷೇತ್ರದ ಮತದಾರರು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ನಂತರ ಎಸ್. ಬಾಲರಾಜ್ ಮಾತನಾಡಿ, ನನ್ನನ್ನು ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಮತದಾರ ಬಂಧುಗಳು ವಿಶೇಷವಾಗಿ ನನ್ನನ್ನ, ನನ್ನ ವ್ಯಕ್ತಿತ್ವವನ್ನು ಗುರುತಿಸಿ ವಿರೋಧ ಪಕ್ಷದ ಅಭ್ಯರ್ಥಿಗಿಂತಲೂ ನಾನು ಒಬ್ಬ ಉತ್ತಮ ಅಭ್ಯರ್ಥಿಯೆಂದು ಪಕ್ಷಭೇದ ಮರೆತು ಬೆಂಬಲಿಸಿ, ಅತ್ಯಧಿಕ ಅಂತರದ ಮತಗಳಿಂದ ಜಯಗಳಿಸಬೇಕೆಂದು ಅಪೇಕ್ಷಿಸಿ ನನಗೆ ವಿರೋಧ ಪಕ್ಷದವರ ಊಹಾಪೋಹಗಳಿಗೆ ಕಿವಿಗೊಡದೆ ಮತ ಚಲಾಯಿಸಿದ್ದಾರೆ. ಅವರೆಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ ಎಂದರು. ಗೆಲುವು ಸಾಧಿಸಿದ ನಂತರ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸ್ಪಂದಿಸುವುದಾಗಿ ತಿಳಿಸಿದರು.
ಜೊತೆಗೆ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಜೆಡಿಎಸ್ ಶಾಸಕರು, ಪಕ್ಷದ ಮುಖಂಡರು ಹಾಗೂ ಮಾಜಿ ಶಾಸಕರು ಹಾಗೂ ಜೆಡಿಎಸ್ ಕಾರ್ಯಕರ್ತರು ಜೊತೆಗೂಡಿ ಹಗಲು ರಾತ್ರಿ ಎನ್ನದೆ ನನ್ನನ್ನು ಬೆಂಬಲಿಸಿ ಮತ ಪ್ರಚಾರದ ಕಾರ್ಯಕ್ರಮಗಳಲ್ಲೂ ಸ್ಪಂದಿಸಿ ನನಗೆ ಬೆಂಬಲ ನೀಡಿದ್ದಾರೆ ಅವರಿಗೂ ಸಹ ನನ್ನ ಹೃದಯಪೂರ್ವಕವಾದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮಾಜಿನಗರ ಸಭಾ ಸದಸ್ಯ ಕೆಕೆ ಮೂರ್ತಿ. ಜಿ. ಮಹದೇವ, ಉಗನಿಯ ಮೂರ್ತಿ, ಉಷಾರಾಣಿ, ಇನ್ನು ಹಲವು ಭಾರತೀಯ ಜನತಾ ಪಕ್ಷದ ಮುಖಂಡರುಗಳ ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.