ಜಮ್ಮು ಕಾಶ್ಮೀರ : ಜಮ್ಮು ಕಾಶ್ಮೀರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಕಾಂಗ್ರೆಸ್ ದಾಪುಗಾಲು ಇಡುತ್ತಿದೆ. ಕಣಿವೆ ರಾಜ್ಯದ ಅಧಿಕಾರ ಹಿಡಿಯೋ ಬಿಜೆಪಿ ಕನಸು ನುಚ್ಚುನೂರಾಗಿದ್ದು, NCP ನಾಯಕ ಒಮರ್ ಅಬ್ದುಲ್ಲಾ ಸರ್ಕಾರ ರಚಿಸೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜನರ ಆದೇಶದ ಮುಂದೆ ಯಾವ ಗಿಮಿಕ್ , ಚೆಲ್ಲಾಟಗಳು ನಡೆಯುವುದಿಲ್ಲ, ಕೇಂದ್ರ ಸರ್ಕಾರ ಮತ್ತು ರಾಜಭವನಗಳ ಯಾವುದೇ ಕುತಂತ್ರಗಳು ನಡೆಯುವುದಿಲ್ಲ ಎಂಬುದನ್ನು ಇಂದಿನ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣಾ ಫಲಿತಾಂಶ ಸಾರುತ್ತದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಮಂಗಳವಾರ ಪ್ರತಿಪಾದಿಸಿದ್ದಾರೆ. ಪಾರದರ್ಶಕತೆ ಇರಬೇಕು. ಏನೇ ನಡೆದರೂ ಪಾರದರ್ಶಕವಾಗಿ ನಡೆಯಬೇಕು. ಜನಾದೇಶದ ಮುಂದೆ ಬೇರೆ ಯಾವುದೂ ನಡೆಯುವುದಿಲ್ಲ. ಇಂದು ಜನಾದೇಶ ಬಿಜೆಪಿ ವಿರುದ್ಧವಾಗಿದ್ದರೆ ಬಿಜೆಪಿ ಯಾವುದೇ ಕುತಂತ್ರ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಒಮರ್ ಅಬ್ದುಲ್ಲಾ ಶ್ರೀನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು, ಮತಗಳ ಎಣಿಕೆಯ ಆರಂಭಿಕ ಪ್ರವೃತ್ತಿಗಳು ಬಿಜೆಪಿ ಮತ್ತು ಇತರ ಪ್ರತಿಸ್ಪರ್ಧಿಗಳಿಗಿಂತ ಪಕ್ಷವು ಮುಂದಿದೆ ಎಂದು ಹೇಳಿದರು.