ಸಂಸದ ಸುನಿಲ್ ಬೋಸ್, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತ ಹಣೆಗೆ ತಾಯಿ ಚಾಮುಂಡಿಯ ಸನ್ನಿಧಿಯಲ್ಲೇ ಕುಂಕುಮವನ್ನ ಇಟ್ಟಿದ್ದಾರೆ.
ಆಷಾಢ ಮಾಸದ ಮೂರನೇ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಜೊತೆಯಾಗಿ ಬಂದಿದ್ದ ಪ್ರವಾಸೋಧ್ಯಮ ಇಲಾಖೆ ಜಂಟಿ ನಿರ್ದೇಶಕಿ ಸವಿತಾ ಮತ್ತು ಚಾಮರಾಜನಗರ ಸಂಸದ ಸುನೀಲ್ಬೋಸ್.
ಈ ವೇಳೆ ಗರ್ಭಗುಡಿಯಲ್ಲಿ ನಿಂತು ವಿಶೇಷ ಪೂಜೆ ಸಲ್ಲಿಸಿದ ನಂತರ ತಮ್ಮ ಬೆಂಬಲಿಗರ ಸಮ್ಮುಖದಲ್ಲಿಯೇ
ಸವಿತಾ ಹಣೆಗೆ ಕುಂಕುಮವನ್ನ ಇಟ್ಟಿದ್ದಾರೆ ಸಂಸದ ಸುನಿಲ್ ಬೋಸ್.ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾದ ಸುನೀಲ್ಬೋಸ್ ಅವರ ಈ ನಡೆಯನ್ನ ಪ್ರಶ್ನಿಸಿ ಬಿಜೆಪಿ ಮುಖಂಡರು ಚುನಾವಣಾ ಅಧಿಕಾರಿಗಳಿಗೆ ದೂರನ್ನ ನೀಡಿದ್ದಾರೆ. ಲೋಕಸಭಾ ಚುನಾವಣೆ ಸಂಧರ್ಭದಲ್ಲಿ ತಮಗೆ ಮದುವೆ ಆಗಿಲ್ಲ ಎಂದು ಅಫಿಡೆವಿಟ್ ಸಲ್ಲಿಸಿದ್ದರು ಸುನೀಲ್ಬೋಸ್. ಹೀಗಾಗಿ ಈ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿರುವ ಚಾಮರಾಜನಗರ ಬಿಜೆಪಿ ಮುಖಂಡರು, ಸುನೀಲ್ಬೋಸ್ ಮತ್ತು ಸವಿತಾ ಜೊತೆಯಲ್ಲಿ ಇರುವ ಪೋಟೋಗಳನ್ನು ಅಧಿಕಾರಿಗಳಿಗೆ ನೀಡಿ ದೂರನ್ನ ನೀಡಿದ್ದಾರೆ.
ಸರ್ಕಾರಿ ಅಧಿಕಾರಿಗೆ ಸಂಸದರು ದೇಗುಲದ ಗರ್ಭಗುಡಿಯಲ್ಲಿ ಏಕೆ ಕುಂಕುಮ ಇಟ್ಟರು ಎಂಬ ಪ್ರಶ್ನೆ ಎಲ್ಲೆಡೆ ಮೂಡಿದೆ. ಸುನಿಲ್ ಬೋಸ್ ತಂದೆ ಸಚಿವ ಮಹದೇವಪ್ಪ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದು , ಸಂವಿಧಾನದ ಅಡಿಯಲ್ಲಿ ಯಾರು ಎಲ್ಲಿಬೇಕಾದ್ರು ಕುಂಕುಮ ಇಡೋಕೆ ಅವಕಾಶವಿದೆ. ಈ ಬಗ್ಗೆ ಹೆಚ್ಚು ಚರ್ಚೆ ಬೇಡ ಅಂತ ಉತ್ತರ ನೀಡೋದ್ರ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಡುವ ಪ್ರಯತ್ನವನ್ನ ಮಾಡಿದ್ದಾರೆ.
Leave a comment