ಡಾ.ಜಮೀರ್ ಅಹಮ್ಮದ್ ಹೇಳಿಕೆ
ಮಡಿಕೇರಿ: ಬಾಲ್ಯದಿಂದಲೇ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸುವುದರಿಂದ ಮಕ್ಕಳಲ್ಲಿ ಸೂಕ್ತ ಸಂಸ್ಕಾರ ಬೆಳೆಸುವಲ್ಲಿ ಶಿಕ್ಷಕ ವಗ೯ ಮತ್ತು ಪೋಷಕರು ಗಮನ ನೀಡುವಂತೆ ಚಿಕ್ಕಅಳುವಾರದಲ್ಲಿನ ಕನ್ನಡ ವಿಶ್ವವಿದ್ಯಾನಿಲಯದ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮ್ಮದ್ ಕರೆ ನೀಡಿದ್ದಾರೆ.
ರೆಡ್ ಬ್ರಿಕ್ಸ್ ನ ಸತ್ಕಾರ್ ಸಭಾಂಗಣದಲ್ಲಿ ಆಯೋಜಿತ, ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಉಪನ್ಯಾಸಕಿ ಪ್ರತಿಮಾ ಹರೀಶ್ ರೈ ವಿರಚಿತ ಅಂತರಗಂಗೆ ಕೖತಿ ಲೋಕಾಪ೯ಣೆ ಸಮಾರಂಭದಲ್ಲಿ ಕೖತಿಯ ಬಗ್ಗೆ ಮಾತನಾಡಿದರು.
ಸಾಮಾಜಿಕ ಹೊಣೆಗಾರಿಕೆ ಹೆಚ್ಚಿಸುವಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದಾಗಿದ್ದು, ಬಾಲ್ಯದಿಂದಲೇ ಮಕ್ಕಳಲ್ಲಿ ಉತ್ತಮ ಸಂಸ್ಕಾರ ರೂಪಿಸುವ ನಿಟ್ಟಿನಲ್ಲಿ ಒಳ್ಳೆಯ ಮಾಹಿತಿಯುಳ್ಳ ಕೖತಿಗಳು ತಮ್ಮದೇ ಕೊಡುಗೆ ನೀಡುತ್ತವೆ. ಅಂತರಗಂಗೆ ಕೖತಿಯು ಸಮಾಜಮುಖಿ ಬರಹಗಳನ್ನು ಒಳಗೊಂಡಿದ್ದು, ಸಮಾಜದ ಒಳಿತಿಗಾಗಿ ಮಾಹಿತಿಯುಕ್ತ ಲೇಖನಗಳನ್ನು ಈ ಲೇಖನಗಳ ಸಂಗ್ರಹ ಒಳಗೊಂಡಿದೆ ಎಂದೂ ಅವರು ವಿಶ್ಲೇಷಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಮಹಿಳಾ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2002ರಿಂದ ಕನ್ನಡ ಸಾಹಿತ್ಯ ಪರಿಷತ್ ಕೊಡಗಿನ ಗೌರಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿನಿಧಿಗೆ ಈವರೆಗೂ 21 ಲೇಖಕಿಯರು ಅಹ೯ರಾಗಿದ್ದಾರೆ, ಈ ಮೂಲಕ ಜಿಲ್ಲೆಯಲ್ಲಿ ಲೇಖಕಿಯರನ್ನು ಪ್ರೋತ್ಸಾಹಿಸುವ ಕೆಲಸವನ್ನು ಕಸಾಪ ಮಾಡುತ್ತಿದೆ ಎಂದರು.
ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಮಾತನಾಡಿ, ಸಪ್ತನದಿಗಳಲ್ಲಿ ಪ್ರಮುಖಳಾಗಿರುವ ಗಂಗೆಯು ಪವಿತ್ರ ನದಿಯಾಗಿ ಖ್ಯಾತಿ ಪಡೆದಿದ್ದು, ಮನುಷ್ಯನ ಮನಸ್ಸನ್ನು ವಿಚಾರಗಳ ಮೂಲಕ ಶುಚಿಗೊಳಿಸುವಂಥ ಅಂಶಗಳು ಅಂತರಗಂಗೆಯಲ್ಲಿದೆ ಎಂದು ಶ್ಲಾಘಿಸಿದರು.
ಕೖತಿ ಲೋಕಾಪ೯ಣೆ ಮಾಡಿದ ಶನಿವಾರಸಂತೆಯ ಉಪನ್ಯಾಸಕಿ ನಯನತಾರಾ ಮಾತನಾಡಿ, ನಿತ್ಯದ ಜೀವನದಲ್ಲಿ ಅನುಭವಿಸುವಂಥ ವಿಚಾರಗಳೊಂದಿಗೇ ವೈಚಾರಿಕ ಚಿಂತನೆಗಳ ಬರಹಗಳು ಅಂತರಗಂಗೆಯಲ್ಲಿ ಇದ್ದು, ಎಲ್ಲಾ ವಯಸ್ಸಿನವರ ಓದಿಗೂ ಸೂಕ್ತವಾಗಿದೆ ಎಂದು ಶ್ಲಾಘಿಸಿದರು.