ಹೊಳೆನರಸೀಪುರ: ಪಟ್ಟಣದ ರಿವರ್ ಬ್ಯಾಂಕ್ ರಸ್ತೆಯಲ್ಲಿರುವ ಎದುರು ಮುಖದ ಶ್ರೀ ರಾಮಲಿಂಗಾಂಜನೇಯಸ್ವಾಮಿ ದೇವಸ್ಥಾನ ಹಾಗೂ ಶ್ರೀ ನಾಗದೇವರ ಪುನಃ ಪ್ರತಿಷ್ಠಾಪನೆ, ಬ್ರಹ್ಮಕುಂಬಾಭಿಷೇಕ ಮಹೋತ್ಸವ ಮಾ.28ರಂದು ನಡೆಯಲಿದೆ.
ಶೃಂಗೇರಿ ಶ್ರೀ ಶಾರದಾಪೀಠಾಧೀಶ್ವರ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಉದ್ಘಾಟನೆ ನೆರವೇರಿಸುವರು. ಶ್ರೀ ಮದಾಂಜನೇಯ ಸ್ವಾಮಿಗೆ ಬ್ರಹ್ಮಕುಂಭಾಭಿಷೇಕ, ಮಹಾಮಂಗಳಾರತಿ, ಶಿಖರ ಕುಂಬಾಭಿಷೇಕ ಮಹಾಪೂಜೆಯನ್ನು ನೆರವೇರಿಸಲಾಗುವುದು.
ಇದೇ ದಿನ ರಾತ್ರಿ ಶ್ರೀ ಆಂಜನೇಯಸ್ವಾಮಿಯವರ ಉತ್ಸವವು ಪಟ್ಟಣದ ಪೇಟೆ ಮುಖ್ಯ ರಸ್ತೆ, ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.