ಪ್ರತಿನಿಧಿ ವರದಿ ಕೊಳ್ಳೇಗಾಲ
ಎರಡುವರೆ ವರ್ಷ ಕೊಳ್ಳೇಗಾಲದ ತಹಸೀಲ್ದಾರ್ ಆಗಿದ್ದ ಎಂ.ಮಂಜುಳಾ ಅವರನ್ನು ರಾಜ್ಯ ಸರ್ಕಾರ ಸ್ಥಳ ತೋರಿಸದೆ ವರ್ಗವಣೆ ಮಾಡಿದೆ.
ಇವರಿಂದ ತೆರವಾದ ಜಾಗಕ್ಕೆ ಸ್ಥಳ ನಿರೀಕ್ಷಣೆಯಲ್ಲಿದ್ದ ತಹಸೀಲ್ದಾರ್ ಐ.ಈ.ಬಸವರಾಜು ಅವರನ್ನು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಚ್.ಜಿ.ಮುಕ್ತಾರ್ ಪಾಷ ಸೆ.5 ರಂದು ನೇಮಕ ಮಾಡಿ ಎಂ.ಮಂಜುಳಾ ಅವರನ್ನು ವರ್ಗಗೊಳಿಸಿದ್ದಾರೆ. 2022 ಫೆ.3 ರಿಂದ ಎಂ.ಮಂಜುಳಾ ಕೊಳ್ಳೇಗಾಲದಲ್ಲಿ ತಹಸೀಲ್ದಾರ್ ಆಗಿದ್ದರು.