ಕಾವೇರಿ ನದಿ ವಿಚಾರದಲ್ಲಿ ರೈತರ ಪ್ರತಿಭಟನೆ, ಆಕ್ರೋಶ ತಪ್ಪಲ್ಲ ಎಂದು ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಆದರೆ ವಿರೋಧ ಪಕ್ಷಗಳು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುತ್ತಿರುವುದು ಸರಿಯಲ್ಲ. ಕೆಲವು ವಿಚಾರದಲ್ಲಿ ಲಿಮೇಟೇಷನ್ನಲ್ಲಿ ಇರಬೇಕು. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಸ್ವಲ್ಪ ರಿಲೀಫ್ ಸಿಗಲಿದೆ. ಈಗ ಬಿಜೆಪಿ ಬೇರೆ ಅಲ್ಲ, ಜೆಡಿಎಸ್ ಬೇರೆ ಅಲ್ಲ. ಇಬ್ಬರು ಒಟ್ಟೊಟ್ಟಿಗೆ ಪೋಟೋ ಕೂಡ ತೆಗೆಸಿಕೊಂಡಿದ್ದಾರೆ. ಒಟ್ಟಿಗೆ ಅನ್ಯೋನ್ಯವಾಗಿದ್ದಾರೆ ಸಂತೋಷ. ಆದರೆ ಈ ವಿಚಾರದಲ್ಲಿ ದೇವೇಗೌಡರಿಗೆ ನೋವಿದೆ. ಅದಕ್ಕೆ ಪಕ್ಷ ಸಂಘಟನೆಯನ್ನ ಕುಮಾರಸ್ವಾಮಿಗೆ ಬಿಟ್ಟಿದ್ದೇವೆ ಎಂದಿದ್ದಾರೆ. ಕುಮಾರಸ್ವಾಮಿ ದೊಡ್ಡವರು, ಏನೋನೋ ಹೇಳ್ತಾರೆ ನಾವು ಏನ್ ಮಾಡೋಕೆ ಆಗುತ್ತೆ. ಕಾವೇರಿ ರೈತರ ಪರ ನಿಲ್ಲುತ್ತೇವೆ ಅಂದ್ರೆ ಸಂತೋಷ. ಆದರೆ ಜನರಿಗೆ ಪ್ರವೋಕ್ ಮಾಡೋದು, ಡೆಲ್ಲಿಗೆ ಹೋಗಿರೋದೆ ವ್ಯರ್ಥ ಅನ್ನೋದು ಸರಿಯಲ್ಲ ಎಂದರು.