ಚೆಕ್ ಬ್ವಾನ್ಸ್ ಮಾಡಿದ ಅಪರಿಚಿತ
ಆರೋಪಿ ಪತ್ತೆಗೆ ಪೊಲೀಸರ ಹುಡುಕಾ
ಪ್ರತಿನಿಧಿ ವರದಿ ಕೊಳ್ಳೇಗಾಲ
ಹಾಸನ ಮೂಲದ ಅಪರಿಚಿತ ಯುವಕ ಪಟ್ಟಣದ ವಸಂತ ಸ್ಟೋರ್ನಲ್ಲಿ 27,500 ರೂ. ಗೆ ಎಲ್ಇಡಿ ಟಿವಿ ಖರೀದಿಸಿ, ತನ್ನ ಖಾತೆಯಲ್ಲಿ ಹಣವಿಲ್ಲದ ಬ್ಯಾಂಕ್ ಚೆಕ್ ನೀಡಿ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಮೊಹಮ್ಮದ್ ಶಾಯಿದ್ ಹಣ ವಂಚಿಸಿರುವ ಅಪರಿಚಿತ ಎಂದು ತಿಳಿದು ಬಂದಿದೆ. ಈತ ಆ.9 ರಂದು ಮಧ್ಯಾಹ್ನ ವಸಂತ ಸ್ಟೋರ್ ಗೆ ಬಂದು ತಾನು ಹಾಸನದ ಜಿಲ್ಲೆಯವನೆಂದು ಪರಿಚಯಿಸಿಕೊಂಡಿದ್ದು, ಕೊಳ್ಳೇಗಾಲ ತಾಲೂಕಿನ ಟಗರಪುರ ಗ್ರಾಮದಲ್ಲಿರುವ ತನ್ನ ಸ್ನೇಹಿತನಿಗೆ ಟಿವಿ ಗಿಫ್ಟ್ ನೀಡಬೇಕಾಗಿದೆ. ಹಾಗಾಗಿ, ಟಿವಿ ಖರೀದಿಗೆ ಬಂದಿದ್ದೇನೆ ಎಂದು ಅಂಗಡಿಯ ವ್ಯವಸ್ಥಾಪಕ ನಂಜುಂಡಸ್ವಾಮಿ ಅವರಿಗೆ ಹೇಳಿದ್ದಾನೆ. ನಂತರ 27,500 ರೂ. ಬೆಲೆ ಬಾಳುವ ಟಿವಿ ಖರೀದಿಸಿದ ಆತ ನನ್ನ ಬಳಿ ಹಣವಿಲ್ಲ. ಬದಲಾಗಿ ಚೆಕ್ ನೀಡುತ್ತೇನೆ ಎಂದು ತಿಳಿಸಿ, ಹಣ ಡ್ರಾ ಮಾಡಿಕೊಳ್ಳಲು ಸಹಿ ಹಾಕಿ ವಸಂತ ಸ್ಟೋರ್ ಹೆಸರಿಗೆ ಚೆಕ್ ನೀಡಿ ಹೋಗಿದ್ದಾನೆ.
ಈ ಚೆಕ್ ಪಡೆದ ವ್ಯವಸ್ಥಾಪಕ ಟಿವಿಯನ್ನು ಅಪರಿಚಿತನಿಗೆ ಕೊಟ್ಟು ಕಳುಹಿಸಿದ್ದಾರೆ. ಬಳಿಕ ಅಂಗಡಿ ಮಾಲೀಕ ಕಿರಣ್ ಕುಮಾರ್ ಅವರಿಗೆ ಈ ವಿಷಯ ತಿಳಿಸಿದ ವ್ಯವಸ್ಥಾಪಕ, 2ರಿಂದ3 ದಿನಗಳ ಕಾಲ ಸರ್ಕಾರಿ ರಜೆ ಇದ್ದರಿಂದ ಬ್ಯಾಂಕ್ ಗೆ ಚೆಕ್ ನೀಡಿ ಹಣ ಡ್ರಾ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆ.12 ರಂದು ಬ್ಯಾಂಕ್ ಅಕೌಂಟ್ ಗೆ ಚೆಕ್ ಹಾಜರುಪಡಿಸಿದ್ದಾರೆ. ಆದರೆ, ಆ ಚೆಕ್ಗೆ ಸಂಬಂದಿಸಿದ ಖಾತೆಯಲ್ಲಿ ಹಣವೇ ಇಲ್ಲ ಎಂಬುದು ಗೊತ್ತಾಗಿದೆ. ಇದರಿಂದ ಆತಂಕಗೊಂಡು ಹಣ ವಂಚಿಸಿದವನ ವಿರುದ್ಧ ಪಟ್ಟಣ ಪೊಲೀಸ್ ಠಾಣಾ ಮೆಟ್ಟಿಲೇರಿದ್ದು, ಪೊಲೀಸರು ವಂಚಕನ ಪತ್ತೆಗೆ ಬಲೆ ಬೀಸಿದ್ದಾರೆ.
22ಕೆಜಿಎಲ್-1ಫೋಟೋ ಶೀರ್ಷಿಕೆ: ಕೊಳ್ಳೇಗಾಲ ಪಟ್ಟಣದ ವಸಂತ ಸ್ಟೋರ್ ಹೆಸರಿಗೆ ಹಾಸನ ಮೂಲದ ಅಪರಿಚಿತ ನೀಡಿರುವ ಬ್ಯಾಂಕ್ ಖಾತೆ ಚೆಕ್.