ಜಿಲ್ಲಾ ಬಾಲಕಾರ್ಮಿಕ ಯೋಜನ ಸೊಸೈಟಿಯ ನಿರ್ದೇಶಕ ಮಹೇಶ್ ಮಾಹಿತಿ
ಪ್ರತಿನಿಧಿ ವರದಿ ಹನೂರು
ಮಕ್ಕಳನ್ನು ನಿಗಧಿತ ವಯಸಿಗಿಂತ ಮುಂಚೆ ಕೆಲಸಗಳಿಗೆ ದುಡಿಸಿಕೊಳ್ಳುವುದು ಅಪರಾಧವಾಗುತ್ತದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನ ಸೊಸೈಟಿಯ ನಿರ್ದೇಶಕ ಮಹೇಶ್ ಹೇಳಿದರು.
ಪಟ್ಟಣದ ಅಂಗಡಿ ಮುಂಗಟ್ಟುಗಳಲ್ಲಿ ಮಾಲೀಕರಿಗೆ ಅರಿವು ಮೂಡಿಸಿ ನಂತರ ಮಾತನಾಡಿದರು.
ಮಕ್ಕಳು ಈ ದೇಶದ ಸಂಪತ್ತು, ಅವರನ್ನು ದುಡಿಸಿಕೊಳ್ಳುವುದು ತಪ್ಪು. ಯಾವುದೇ ಕಾರಣಕ್ಕೂ ಮಾಲೀಕರು ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳಬಾರದು ಎಂದರು.
ಜಿಲ್ಲಾ ಕಾರ್ಮಿಕ ನಿರೀಕ್ಷಕ ಪ್ರಸಾದ್ ಮಾತನಾಡಿ, ಹನೂರು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿಗಳು ಕಂಡು ಬಂದರೆ ಮಾಹಿತಿ ನೀಡಬೇಕು ಎಂದರು.
ಬಚ್ ಪನ್ ಬಚಾವೋ ರಾಜ್ಯ ಸಂಯೋಜಕ ವರ್ಗಿಸ್, ಸಹ ಸಂಯೋಜಕ ರಿಯಾಜ್ ಅಹಮದ್, ಹೋಲಿಕ್ರಾಸ್ ಸಂಸ್ಥೆಯ ಬಸವರಾಜ್, ಸುರೇಶ್ ಉಪಸ್ಥಿತರಿದ್ದರು.