ಪ್ರತಿನಿಧಿ ವರದಿ ಗೋಣಿಕೊಪ್ಪ
ಸಂತ ಅಂತೋಣಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಪೊನ್ನಂಪೇಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಮಕ್ಕಳು ನಲಿದಾಡಿದರು.
ಅಂತೋಣಿ ಪ್ರೌಢ ಶಾಲೆಯ ಆಡಳಿತ ಅಧಿಕಾರಿ ಡೇವಿಡ್ ಸಗರಾಯ್ ರಾಜ್ ಮಾತನಾಡಿ, ಮಕ್ಕಳಿಗೆ ತಮ್ಮ ಪ್ರತಿಭೆಗಳನ್ನು ಹೊರಹಾಕಲು ಉತ್ತಮ ವೇದಿಕೆ ದೊರಕಿದ್ದು, ಎಲ್ಲ ಮಕ್ಕಳು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ಸರ್ಕಾರಿ, ಅನುದಾರಹಿತ ಶಾಲೆಗಳ ಕಿರಿಯ, ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆಯ 1 ರಿಂದ 4 ನೇ ತರಗತಿ, 5 -7ನೇ, 8 -12 ನೇ ತರಗತಿ ವಿಭಾಗಕ್ಕೆ ಸ್ಪರ್ಧೆ ನಡೆಯಿತು.
ಕ್ಲೇ ಮಾಡಲಿಂಗ್, ಛದ್ಮವೇಶ, ಭಾವಗೀತೆ, ಜನಪದ ನೃತ್ಯ, ಚಿತ್ರಕಲೆ. ವಿಭಾಗದಲ್ಲಿ ಭಾಗವಹಿಸಿ ಭಾಗವಸಿದ್ದರು.
ವಂದನೀಯ ಸಿಸ್ಟರ್ ಫ್ಲೋಸ್ಸಿ ಅಧ್ಯಕ್ಷತೆ ವಹಿಸಿದ್ದರು. ಸಂತ ಅಂತೋಣಿ ಪ್ರೌಢ ಶಾಲೆಯ ವಂದನೀಯ ಫಾದರ್ ಡೇವಿಡ್ ಸಗರಾಯಿ. ರಾಜ್, ರಾಜ್ಯ ಸರ್ಕಾರಿ ಎಸ್.ಸಿ., ಎಸ್.ಟಿ. ನೌಕರರ ಸಮಾನ್ವಯ ಸಮಿತಿ ಅಧ್ಯಕ್ಷ ಟಿ.ಎಸ್.ಮಹೇಶ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರ ಎನ್.ನಿಂಗರಾಜು, ಕಾರ್ಯದರ್ಶಿ ಡಿ.ಚಂದನಾ, ಪ್ರೌಡಶಾಲಾ ಸಹ ಶಿಕ್ಷಕರ ಸಂಘದ ಸಂಯೋಜಕ ಕೆ.ಆರ್.ವಿಶಾಲಾಕ್ಷಮ್ಮ, ಸಮೂಹ ಸಂಪನ್ಮೂಲ ವ್ಯಕ್ತ ತಿರುನೆಲ್ಲಿಮಾಡ ಜೀವನ್, ಶಿಕ್ಷಕರಾದ ಕೆ.ಬಿ.ಪುಷ್ಪ, ಶ್ರೀಕೃಷ್ಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಫೋಟೋ 19 ಜಿಕೆಪಿ 02 ; ಪೊನ್ನಂಪೇಟೆಯಲ್ಲಿ ನಡೆದ ಕಲೋತ್ಸದಲ್ಲಿ ಮಕ್ಕಳ ನೃತ್ಯ.