ಪ್ರತಿನಿಧಿ ವರದಿ ನಾಪೋಕ್ಲು
ಕರ್ನಾಟಕ ಜೂನಿಯರ್ ಫುಟ್ಬಾಲ್ ತಂಡಕ್ಕೆ ಕುಂಜಿಲ ಗ್ರಾಮದ ಕುಂಡಂಡ ನಿಯಾಬ್ ಆಯ್ಕೆಯಾಗಿದ್ದಾರೆ. ಆ.12 ರವರೆಗೆ ಛತ್ತೀಸ್ಗಡ್ನಲ್ಲಿ ಚಾಂಪಿಯನ್ ಶಿಪ್ ಬಿ.ಸಿ.ರಾಯ್ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇವರು ಕಕ್ಕಬ್ಬೆ ಕೆಸಿಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆದು ಬೆಂಗಳೂರಿನಲ್ಲಿರುವ ಡಿವೈಇಎಸ್ ಕ್ರೀಡಾ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕುಂಜಿಲ ಗ್ರಾಮದ ಕುಂಡಂಡ ಯೂಸುಫ್, ನಸೀಮ ದಂಪತಿ ಪುತ್ರ.
ಫೋಟೋ 3 ಎಂಡಿಕೆ 01 ; ಕುಂಡಂಡ ನಿಯಾಬ್