ಬೆಂಗಳೂರು : ನಗರದಲ್ಲಿ ಕುಡಿಯುವ ನೀರಿನ ಶಾಶ್ವತ ಸಮಸ್ಯೆ ಬಗೆಹರಿಸಲು ತಜ್ಞರ ಸಮಿತಿ ರಚನೆ ಮಾಡಲು ಹೇಳಿದ್ದೇನೆ. ಕುಡಿಯುವ ನೀರು ಕುಡಿಯೋದಕ್ಕೆ ಮಾತ್ರ ಬಳಸಬೇಕು. ಕುಡಿಯುವ ನೀರು ದುರ್ಬಳಕೆ ಮಾಡಿಕೊಳ್ಳಬಾರದು. ಒಟ್ಟಾರೆ 500 ಎಂಎಲ್ಡಿ ನೀರಿನ ಕೊರತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲ ಮಂಡಳಿ ಮತ್ತು ಬಿಬಿಎಂಪಿ ಇಂಧನ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದೆ. ಬೆಂಗಳೂರಲ್ಲಿ 1470 MLD ನೀರು ಮಾತ್ರ ಕಾವೇರಿ ನೀರಿನಿಂದ ಬರ್ತಿದೆ. ಉಳಿದದ್ದು ಬೋರ್ ವೆಲ್ ಮೂಲಕ 14 ಸಾವಿರ ಬೋರ್ ವೆಲ್ ಇದೆ. ಅದರಲ್ಲಿ 6 ಬೋರ್ ವೆಲ್ ಡ್ರೈ ಆಗಿಬಿಟ್ಟಿದೆ ಎಂದು ತಿಳಿಸಿದರು.
2600 MLD ನೀರು ಬೆಂಗಳೂರಿಗೆ ಬೇಕು. ಆದರೆ ಬೆಂಗಳೂರಲ್ಲಿ 1470 MLD ನೀರು ಮಾತ್ರ ಬರುತ್ತಿದೆ. ಅದಕ್ಕಿಂತ ಹೆಚ್ಚು ನೀರು ಪಂಪ್ ಮಾಡುವುದಕ್ಕೆ ಆಗಲ್ಲ. ಅದರ ಕ್ಯಾಪಿಸಿಟಿ ಇಷ್ಟೇ ಇರುವುದು. ಕಳೆದ ಬಾರಿಯು ಇಷ್ಟೇ ಆಗಿದ್ದು. 110 ಹಳ್ಳಿಗಳಿಗೆ ಈ ಹಿಂದೆ ನಾನು ಇದ್ದಾಗ ನೀರು ಕೊಡಬೇಕು ಎಂದು ತೀರ್ಮಾನ ಮಾಡಿದ್ದೆ. ಆದರೆ ಹಿಂದಿನ ಸರ್ಕಾರದ ಕೋವಿಡ್ ಅಂತ ಹೇಳಿ ಮಾಡಲಿಲ್ಲ.
ಅದು ಜೂನ್ನಲ್ಲಿ ಆ ಕಾಮಗಾರಿ ಮುಗಿಯುತ್ತೆ. ಕಾವೇರಿ ಮತ್ತು ಕಬಿನಿಯಲ್ಲಿ ಬೆಂಗಳೂರಿಗೆ ಎಷ್ಟು ಬೇಕು ಅಷ್ಟು ಇಟ್ಟುಕೊಂಡಿದ್ದೇವೆ. ಜೂನ್ನಿಂದ ಮಾನ್ಸೂನ್ ಆರಂಭವಾಗಲಿದೆ. ಕಾವೇರಿಯಲ್ಲಿ 11.4 TMC ನೀರಿದೆ ಕಬಿನಿಯಲ್ಲಿ 9.02 TMC ನೀರಿದೆ ಎಂದು ಹೇಳಿದ್ದಾರೆ.