ಪ್ರತಿನಿಧಿ ವರದಿ ಕೊಳ್ಳೇಗಾಲ
ತಾಲೂಕಿನ ಸಿಂಗಾನಲ್ಲೂರು ಗ್ರಾಮದ ಪರಿಶಿಷ್ಟಜಾತಿ ಬೀದಿಯಲ್ಲಿ ಶನಿವಾರ ಬೆಳಗ್ಗೆ ಯಜಮಾನರು ಹಾಗೂ ಮುಖಂಡರು ಸಂಸದ ದಿವಂಗತ ವಿ.ಶ್ರೀನಿವಾಸ ಪ್ರಸಾದ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪುಣ್ಯಸ್ಮರಣೆ ಆಚರಿಸಿದರಲ್ಲದೇ, ನೂರಾರು ಜನರಿಗೆ ಅನ್ನ ಸಂತರ್ಪಣೆ ಮಾಡಿದರು.
ಗ್ರಾಮದ ಪರಿಶಿಷ್ಟಜಾತಿ ಬೀದಿಯ ಅರಳಿಮರದ ಕಟ್ಟೆಯಲ್ಲಿ ಬೆಳಗ್ಗೆ ಸಮಾವೇಶಗೊಂಡ ಮುಖಂಡರು ವಿ.ಶ್ರೀನಿವಾಸಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಅಂತೆಯೇ, ಗ್ರಾಮದ ಹೊಸ ಬಡಾವಣೆಯಲ್ಲಿಯೂ ಪ್ರಸಾದ್ ಅವರ ಪುಣ್ಯಸ್ಮರಣೆ ಆಚರಿಸಿದ ಮುಖಂಡರು ಅಲ್ಲಿಯೂ ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ಬಳಿಕ ಎರಡೂ ಕಡೆಗಳಲ್ಲಿ ಮುಖಂಡರು ವಿ.ಶ್ರೀನಿವಾಸ ಪ್ರಸಾದ್ ಅವರ ಕುರಿತು ಗುಣಗಾನ ಮಾಡಿ ಅವರು ವಿ.ಶ್ರೀನಿವಾಸ ಪ್ರಸಾದ್ ಅವರು ಕೈಗೊಂಡಿದ್ದ ಅಭಿವೃದ್ಧಿ ಕೆಲಸಗಳನ್ನು ಸ್ಮರಿಸಿದರು.
ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗದ ಉಪಾಧ್ಯಕ್ಷರೂ ಹಾಗೂ ಸಿಂಗಾನಲ್ಲೂರು ಗ್ರಾ.ಪಂ.ಸದಸ್ಯ ಪ್ರಸಾದ್, ನಿವೃತ್ತ ಪ್ರಾಂಶುಪಾಲ ಸಿದ್ದರಾಜು, ಯಜಮಾನರಾದ ಕೃಷ್ಣ, ಮಹದೇವಯ್ಯ, ಬಸವಲಿಂಗಯ್ಯ, ಮುಖಂಡ ದೇವರಾಜು ಸೇರಿದಂತೆ ಇತರರು ಇದ್ದರು.
11ಕೆಜಿಎಲ್-1
ಫೋಟೋ ಶೀರ್ಷಿಕೆ:
ಕೊಳ್ಳೇಗಾಲ ತಾಲೂಕಿನ ಸಿಂಗಾನಲ್ಲೂರು ಗ್ರಾಮದ ಪರಿಶಿಷ್ಟಜಾತಿ ಬೀದಿಯ ಅರಳಿ ಶನಿವಾರ ಬೆಳಗ್ಗೆ ಯಜಮಾನರು ಹಾಗೂ ಮುಖಂಡರು ಸಂಸದ ದಿವಂಗತ ವಿ.ಶ್ರೀನಿವಾಸ ಪ್ರಸಾದ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಸಿದರು.