(ಈ ಸುದ್ದಿಯನ್ನು ತಪ್ಪದೆ ಬಳಸಿಕೊಳ್ಳಿ. ಇಂದು ಅರ್ಧ ಪುಟ ಜಾಹೀರಾತು ಬಂದಿದೆ)
ಪ್ರತಿನಿಧಿ ವರದಿ ಚಾಮರಾಜನಗರ
ವೇಣುಗೋಪಾಲ್ ಗೋಲ್ಡ್ ಪ್ಯಾಲೇಸ್ ವತಿಯಿಂದ ಚಾಮರಾಜನಗರದಲ್ಲಿ ಜೂ.2ರಂದು ನೂತನವಾಗಿ ಮೊದಲ ಶಾಖೆಯನ್ನು ಆರಂಭಿಸಲಾಗುತ್ತಿದೆ ಎಂದು ವೇಣುಗೋಪಾಲ್ ಗೋಲ್ಡ್ ಪ್ಯಾಲೇಸ್ ಮಾಲೀಕ ಒ.ವಿ.ದಿವಾಕರ್ ತಿಳಿಸಿದರು.
ಜೂ.2ರ ಬೆಳಗ್ಗೆ 10.30ಕ್ಕೆ ನಗರದ ಡೀವಿಯೇಷನ್ ರಸ್ತೆಯಲ್ಲಿರುವ ಶ್ರೀ ಭುವನೇಶ್ವರಿ ವೃತ್ತದ ಬಳಿ ಆರಂಭವಾಗುತ್ತಿರುವ ವೇಣುಗೋಪಾಲ್ ಗೋಲ್ಡ್ ಪ್ಯಾಲೇಸ್ ಆರಂಭೋತ್ಸವ ಕಾರ್ಯಕ್ರಮಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ, ಮುಂಬೈನ ಆಲ್ ಇಂಡಿಯಾ ಜೇಮ್ಸ್ ಅಂಡ್ ಜ್ಯೂಯಲರಿ ಡೊಮೆಸ್ಟಿಕ್ ಕೌನ್ಸಿಲ್ ನ ಅಧ್ಯಕ್ಷ ಸಯಂ ಮೆಹ್ರ, ಕನ್ನಡ ಚಲನಚಿತ್ರ ನಟಿ ರಾಗಿಣಿ ದ್ವಿವೇದಿ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಮುಂಬೈನ ಇಂಡಿಯನ್ ಬುಲಿಯನ್ ಮತ್ತು ಜ್ಯೂಯಲರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಡಾ. ಚೇತನ್ ಕುಮಾರ್ ಮೆಹ್ತ ಮತ್ತು ಕರ್ನಾಟಕ ಸ್ಟೇಟ್ ಜ್ಯೂಯಲರಿ ಫೌಂಡೇಶನ್ ಅಧ್ಯಕ್ಷ ಶ್ರೀಕಾಂತ್ ಕರಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರದಲ್ಲಿ ನಮ್ಮ ಮೊದಲ ಶಾಖೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜೂ.2 ರಿಂದ 8 ರವರೆಗೆ ರಿಯಾಯಿತಿ ದರದಲ್ಲಿ ಚಿನ್ನಾಭರಣಗಳನ್ನು ಮಾರಾಟ ಮಾಡಲಾಗುವುದು. 10ಗ್ರಾಂ. ಚಿನ್ನಾಭರಣದ ಖರೀದಿಯ ಮೇಲೆ 2 ಸಾವಿರ ರೂ.ರಿಯಾಯಿತಿ, ಪ್ರತಿ ಕೆಜಿ ಬೆಳ್ಳಿ ಪದಾರ್ಥಗಳ ಮೇಲೆ 3ಸಾವಿರ ರೂ. ರಿಯಾಯಿತಿ ಹಾಗೂ ಒಂದು ಲಕ್ಷ ಮೌಲ್ಯದ ವಜ್ರಾಭರಣಗಳ ಖರೀದಿಯ ಮೇಲೆ 5 ಸಾವಿರ ರೂ.ರಿಯಾಯಿತಿಯನ್ನು ನೀಡಲಾಗುತ್ತಿದೆ. ಅಲ್ಲದೆ 500 ರೂ. ಮೇಲ್ಪಟ್ಟು ಆಭರಣಗಳನ್ನು ಕೊಂಡಲ್ಲಿ ಅವರಿಗೆ ಒಂದು ಕೂಪನ್ ನೀಡಲಾಗುತ್ತದೆ. ಜೂ.8ರ ನಂತರ ಕೂಪನ್ ಡ್ರಾ ಮಾಡಿ ಕೂಪನ್ ನಲ್ಲಿ ವಿಜೇತರಾದವರಿಗೆ ಒಂದು ಲಕ್ಷ ರೂ.ಮೌಲ್ಯದ ವಜ್ರದ ನೆಕ್ಲೆಸ್ ಉಚಿತವಾಗಿ ನೀಡಲಾಗುವುದು ಎಂದರು.
30ಸಿಎಚ್ಎನ್.2:
ಚಿತ್ರವಿದೆ