ಮ೦ಗಳೂರು: ರಾಜ್ಯಕ್ಕೆ ನೀಡಬೇಕಾದ ತೆರಿಗೆಯಲ್ಲಿ ವಂಚನೆ, ಜಿ.ಎಸ್.ಟಿಯಲ್ಲಿ ಮೋಸ, ಪ್ರವಾಹ ಮತ್ತು ಬರ ಪರಿಹಾರದ ಸಹಾಯನುಧಾನವನ್ನು ನೀಡದೇ ವಂಚನೆ ಮಾಡಿ ಅನ್ಯಾಯ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರದ ನಿಲುವು ಖಂಡಿಸಿ ಹಾಗೂ ಪ್ರಧಾನಿ ಮೋದಿ ನಡೆಯನ್ನು ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಕೆ.ಹರೀಶ್ ಕುಮಾರ್ ಅವರ ನೇತೃತ್ವದಲ್ಲಿ ಶನಿವಾರ ಮಂಗಳೂರಿನ ಮಿನಿವಿಧಾನ ಸೌಧದ ಎದುರು ತುರ್ತು ಪ್ರತಿಭಟನೆ ಜರಗಿತು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಶಾಸಕ ಐವನ್ ಡಿಸೋಜಾ, ಮುಖಂಡರಾದ ಕೆ.ಅಶ್ರಫ್, ಅಶ್ರಫ್ ಬಜಾಲ್, ಮಲಾರ್ ಮೋನು, ನೀರಜ್ ಚಂದ್ರಪಾಲ್, ಜೋಕಿಂ ಡಿಸೋಜ, ಡಾ. ಶೇಖರ್ ಪೂಜಾರಿ, ಸತೀಶ್ ಪೆಂಗಲ್, ಹೇಮಂತ್ ಗರೋಡಿ, ಅಲಿಸ್ಟರ್ ಡಿಕುನ್ಹ, ಸಬಿತಾ ಮಿಸ್ಕಿತ್, ರಮಾನಂದ ಪೂಜಾರಿ, ಕವಿತ ವಾಸು, ಶಾಂತಲ ಗಟ್ಟಿ, ಝಕರಿಯಾ ಮಲಾರ್, ಡಿ.ಎಂ.ಮುಸ್ತಫ, ಇಮ್ರಾನ್ ಎ.ಆರ್., ಸಲೀಂ ಪಾಂಡೇಶ್ವರ, ಜಯರಾಜ್ ಕೋಟ್ಯಾನ್, ಆಶೀಫ್ ಬೆಂಗ್ರೆ, ಅನ್ಸಾರ್ ಸಾಲ್ಮಾರ, ಸವಾದ್ ಸುಳ್ಯ, ಸೌಹಾನ್ ಎಸ್.ಕೆ, ಸುಹಾನ್ ಆಳ್ವ ಮತ್ತಿತರರಿದ್ದರು.
Leave a comment