ಪ್ರತಿನಿಧಿ ವರದಿ ಎಚ್.ಡಿ. ಕೋಟೆ
ತಾಲೂಕಿಗೆ ಪ್ರಥಮವಾಗಿ ಬಿಎಸ್ಸಿ ಕಾಲೇಜು ತರುವ ನಿಟ್ಟಿನಲ್ಲಿ ಸತತ ಪ್ರಯತ್ನ ಮಾಡಿ ಯಶಸ್ವಿ ಕಂಡಿದ್ದೇವೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಎಸ್ ಸಿಪಿ, ಟಿ ಎಸ್ ಪಿ ಯೋಜನೆಯಡಿ ನೂತನ ಕಟ್ಟಡ ನಿರ್ಮಾಣ ಮಾಡಲು ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಎಚ್.ಡಿ. ಕೋಟೆ ತಾಲೂಕಿಗೆ ಪ್ರಥಮವಾಗಿ ಬಿಎಸ್ಸಿ ಕಾಲೇಜನ್ನು ತರುವ ನಿಟ್ಟಿನಲ್ಲಿ ಸತತ ಪ್ರಯತ್ನ ಮಾಡಿ, ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಹಾಗೂ ಮುಖ್ಯಮಂತ್ರಿಗೂ ಮನವಿ ಸಲ್ಲಿಸಿದ್ದೆ ಎಂದು ತಿಳಿಸಿದರು.
ಎಚ್.ಡಿ. ಕೋಟೆಯ ಪದವಿ ಪೂರ್ವ ಕಾಲೇಜಿಗೆ ನೂತನವಾಗಿ 2.70 ಕೋಟಿ ರೂ. ವೆಚ್ಚದಲ್ಲಿ 6 ಕೊಠಡಿಗಳನ್ನು ನಿರ್ಮಾಣ ಮಾಡಲು ಭೂಮಿಪೂಜೆ ನೆರವೇರಿಸಿದ್ದೇನೆ. ಈಗಾಗಲೇ ₹1 ಕೋಟಿ ವೆಚ್ಚದಲ್ಲಿ 5 ಕೊಠಡಿಗಳ ಕಾಮಗಾರಿ ನಿರ್ಮಾಣ ಹಂತದಲ್ಲಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಈ ಕೊಠಡಿಗಳು ಬಳಕೆಗೆ ಸಿಗಲಿವೆ ಎಂದರು.
ರಾಜ್ಯದಲ್ಲಿ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ನಮ್ಮ ತಾಲೂಕು ಹೊಂದಿದ್ದು ಇದನ್ನು ಹೋಗಲಾಡಿಸುವ ಸಲುವಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡಲಾಗುತ್ತಿದೆ. ನಮ್ಮದೇ ಸರ್ಕಾರ ಅಸ್ತಿತ್ವದಲ್ಲಿದ್ದು, ಮುಖ್ಯಮಂತ್ರಿ ನಮ್ಮ ತವರು ಜಿಲ್ಲೆಯವರೇ ಆಗಿದ್ದು ಅವರ ಗಮನ ಸೆಳೆದು, ಇನ್ನೂ ಹೆಚ್ಚಿನ ಅನುದಾನವನ್ನು ನಮ್ಮ ತಾಲೂಕಿಗೆ ತರಲಾಗುವುದು ಎಂದು ಭರವಸೆ ನೀಡಿದರು.
ಪ್ರಾಂಶುಪಾಲ ಎಚ್.ಆರ್. ಅರುಣ್ ಕುಮಾರ್, ಮೈಮುಲ್ ನಿರ್ದೇಶಕ ಈರೇಗೌಡ, ಕೊಡಸೀಗೆ ರಾಜೇಗೌಡ, ನಾಗನಹಳ್ಳಿ ಪ್ರದೀಪ, ರಾಜು ವಿಶ್ವಕರದಮ, ಸುದರ್ಶನ್, ಪ್ರಾದ್ಯಾಪಕರಾದ ಕಾತ್ಯಾಯಿನಿ, ಗಣೇಶ, ಕೆಂಪರಾಜು, ಪುಷ್ಪಲತಾ, ಪೂರ್ಣಿಮಾ, ರಾಜಶೇಖರ, ಪುಟ್ಟರಾಜು, ನಿಂಗರಾಜು, ಬೋರಮ್ಮ ಅಂಗಡಿ, ದಮ್ಮೂರಪ್ಪ, ಗುರುದತ್ತ ಕುಮಾರ್, ಪುಟ್ಟರಾಜು, ಬಾಲಾಜಿ, ಮಹದೇವಮ್ಮ ಇದ್ದರು.