ಮೈಸೂರು: ಅಶೋಕಪುರಂ ರೈಲ್ವೆ ಯಾರ್ಡ್ ಅನ್ನು ಮೈಸೂರಿನ ಎರಡನೇ ರೈಲ್ವೆ ನಿಲ್ದಾಣವಾಗಿ ಪರಿವರ್ತನೆಗೊಳಿಸಲಾಗಿದ್ದು, ಶೀಘ್ರದಲ್ಲೇ ಆರನೇ ಪ್ಲ್ಯಾಟ್ಫಾರಂ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಸಂಸದ ಪ್ರತಾಪ್ಸಿಂಹ ತಿಳಿಸಿದರು. ನೈರುತ್ಯ ರೈಲ್ವೆ ಮೈಸೂರು ವಿಭಾಗದ ವತಿಯಿಂದ ಮರು ರೂಪಿಸಲಾದ ಅಶೋಕಪುರಂ ರೈಲ್ವೆ ಯಾರ್ಡ್, ಎರಡನೇ ಪ್ರವೇಶ ದ್ವಾರ ಮತ್ತು ಹೊಸದಾಗಿ ನಿರ್ಮಿಸಲಾದ ಪಾದಚಾರಿ ಮೇಲ್ಸೇತುವೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ”ಅಶೋಕಪುರಂ ರೈಲ್ವೆ ನಿಲ್ದಾಣ ಅಂದಧಿರೆ ಜನರಿಗೆ ಬೇರೆಯದೆ ಕಲ್ಪನೆ ಇತ್ತು. ಇದೊಂದು ಗುಜರಿ ಅಂಗಡಿಯಂತೆ ಮಾರ್ಪಾಡಾಗಿತ್ತು. ಇದೀಗ ಎಲ್ಲರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕೇಂದ್ರ ಸರಕಾರಕ್ಕೆ ದುಡ್ಡು ಮತ್ತು ಇಚ್ಛಾಧಿಶಕ್ತಿ ಕೊರತೆ ಇಲ್ಲ. ಹಾಗಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿದೆ,” ಎಂದು ತಿಳಿಸಿದರು.