ಮೈಸೂರಿನಲ್ಲಿ ಇತ್ತೀಚೆಗೆ ರಾಜಕೀಯ ಸಮಾವೇಶಗಳು ನಡೆದ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ರಿಂದ ಗೋ ಮೂತ್ರ ಸಿಂಪಡಿಸುವ ಮೂಲಕ ವಿನೂತನವಾಗಿ ಚಳುವಳಿಯನ್ನು ಮಾಡಲಾಯಿತು. ಮೈಸೂರು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಗೋಮೂತ್ರ ಸಿಂಪಡಿಸುವ ಮೂಲಕ ಅಪವಿತ್ರವಾದ ಮೈಸೂರು ಶುದ್ಧವಾಗಲಿ ಎಂದು ಗೋ ಮೂತ್ರ ಸಿಂಪಡಿಸಿದ್ದಾರೆ ವಾಟಾಳ್ ನಾಗರಾಜ್.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳ್ಳರು, ಸುಳ್ಳರು, ಭ್ರಷ್ಟರ ಪಾಪದ ಧೂಳು ಮೈಸೂರಿಗೆ ತಲುಪಿದೆ, ಅದು ತೊಲಗಲಿ ಎಂದು ಗೋಮೂತ್ರ ಸಿಂಪಡಣೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿದ್ದಾಗಿ ತಿಳಿಸಿದ್ದಾರೆ.
ಇತ್ತೀಚಿನ ರಾಜ್ಯ ರಾಜಕೀಯ ವಿದ್ಯಮಾನ ಹಾಗು ರಾಜಕೀಯ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ವಾಟಾಳ್ ನಾಗರಾಜ್ ಅವರು ಸಿಎಂ ಸಿದ್ದರಾಮಯ್ಯ ಬಗ್ಗೆ ವಾಟಾಳ್ ಅವರಿಗಿರುವ ಸಾಫ್ಟ್ ಕಾರ್ನರ್ ಬಗೆಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಇರುವ ರಾಜಕಾರಣಿಗಳಲ್ಲಿ ಸಿಎಂ ಸಿದ್ದರಾಮಯ್ಯ ಉತ್ತಮ ವ್ಯಕ್ತಿ, ಅದಕ್ಕೆ ಅವರ ಮೇಲೆ ಗೌರವವಿದೆ ಆದರೆ ಸಾಫ್ಟ್ ಕಾರ್ನರ್ ಅಂತ ಏನೂ ಇಲ್ಲ.ಸಿಎಂ ಆಗಿದ್ದ ಬೇರೆಯವರಿಗೆ ಹೋಲಿಸಿದರೆ ಸಿದ್ದರಾಮಯ್ಯ ಪ್ರಾಮಾಣಿಕರು.ಇಂತಹವರು ರಾಜ್ಯ ರಾಜಕಾರಣದಲ್ಲಿರಬೇಕು. ಬೇರೆಯವರೆಲ್ಲ ಕಳ್ಳರು, ಸುಳ್ಳರು, ಭ್ರಷ್ಟರೇ ಜಾಸ್ತಿ ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಸ್ವಲ್ಪ ಗೌರವ ಜಾಸ್ತಿ ಎಂದಿದ್ದಾರೆ.