ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಮೈಸೂರು ಸೈಬರ್ ಕ್ರೈಮ್ ನ ಎಸಿಪಿ ಸ್ನೇಹರಾಜ್ ಮತ್ತು ತಂಡದಿಂದ ಇಂದು ನಗರದ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಜಾಗೃತಿಕಾರ್ಯಕ್ರಮವನ್ನ ನಡೆಸಲಾಯಿತು.
ಟೆಕ್ನಾಲಜಿ ಮುಂದುವರೆದಂತೆ ಅನುಕೂಲಗಳು ಎಷ್ಟು ಪಡೆಯುತ್ತೇವೆಯೋ, ಅಷ್ಟೇ ತೊಂದರೆಗೆ ಒಳಪಡ್ತಿದ್ದೇವೆ. ಈ ರೀತಿಯ ತೊಂದರೆಗಳು ಪೋಲೀಸರಿಗೆ ಹೆಚ್ಚು ತಲೆನೋವಾಗಿ ಪರಿಣಮಿಸಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರನ್ನ ವಂಚಿಸಲು ವಂಚಕರು ದಿನಕ್ಕೊಂದು ಸ್ಕೀಂ ಹಾಕಿ ಸಜ್ಜಾಗುತ್ತಿದ್ದಾರೆ. ಈ ಬಗೆಗೆ ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಇಂದು ಮಾಹಿತಿ ನೀಡುವ ಮೂಲಕ ಪೋಲೀಸ್ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಿದೆ. ಅಲ್ಲದೆ ಸೈಬರ್ ಕ್ರೈಮ್ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಎಸಿಪಿ ಸ್ನೇಹರಾಜ್ ಮನವಿ ಮಾಡಿದ್ದಾರೆ.