ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಡಿ ಬಾಸ್ ದರ್ಶನ್ ಜೈಲು ಸೇರಿ 2 ತಿಂಗಳು ಕಳೆದಿದೆ. ಜೈಲೂಟ ತಿನ್ನಲು ಆಗ್ತಿಲ್ಲ ಎನ್ನುತ್ತಿರುವ ದರ್ಶನ್ ಗೆ ಸದ್ಯ ಪರಪ್ಪನ ಅಗ್ರಹಾರದ ಊಟವೇ ಗತಿಯಾಗಿದೆ. ನಟ ದರ್ಶನ್ ಮನೆಯೂಟಕ್ಕೆ ಅರ್ಜಿ ಸಲ್ಲಿಸಿದ್ದ ವಿಚಾರವಾಗಿ ಇಂದು ಹೈಕೋರ್ಟ್ನಲ್ಲಿ ವಿಚಾರಣೆ ನಡೆದಿದೆ. ಸದ್ಯಕ್ಕೆ ಮನೆಯೂಟ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದ್ದು, ವಿಚಾರಣೆ ಮುಂದೂಡಿದೆ.
ಮನೆ ಊಟ ಬೇಕೆಂದು ನಟ ದರ್ಶನ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆದಿದ್ದು. ಮನೆಯೂಟಕ್ಕೆ ಕಾದಿದ್ದ ನಟ ದರ್ಶನ್ ಗೆ ಇಂದೂ ಕೂಡ ನಿರಾಸೆಯಾಗಿದೆ. ಸದ್ಯ ಮನೆಯೂಟ ನೀಡಲು ಸಾಧ್ಯವಿಲ್ಲ ಎಂದು ಹೈ ಕೋರ್ಟ್ ಹೇಳಿದೆ.
ಕಳೆದ ಎರಡು ತಿಂಗಳಿನಿಂದ ಜೈಲೂಟ ತಿಂದು ನಟ ದರ್ಶನ್ ತೂಕ ಕಡಿಮೆ ಆಗಿದೆ ಎನ್ನಲಾಗ್ತಿದೆ. ಮನೆ ಊಟ, ಹಾಸಿಗೆ, ಹಾಗೂ ಕೆಲವು ಪುಸ್ತಕಗಳು ಬೇಕೆಂದು ಡಿ ಬಾಸ್ ಹೈ ಕೋರ್ಟ್ ನ ಮೊರೆ ಹೋಗಿದ್ದರು. ಆದರೆ ನಟ ದರ್ಶನ್ ಅವರ ಮನವಿಯನ್ನ ಹೈ ಕೋರ್ಟ್ ತಿರಸ್ಕರಿಸಿದೆ.
ಸೆಂಟ್ರಲ್ ಜೈಲಿನಲ್ಲಿ ಪೌಷ್ಠಿಕ ಆಹಾರ ನೀಡಲಾಗ್ತಿದೆ. ಆಹಾರದಲ್ಲಿ ಸಮಸ್ಯೆ ಬಗ್ಗೆ ಇದುವರೆಗೂ ದೂರು ಬಂದಿಲ್ಲ. ದರ್ಶನ್ ಕೊಲೆ ಕೇಸ್ ನಲ್ಲಿ ಎರಡನೇ ಆರೋಪಿಯಾಗಿದ್ದು, ಆತನಿಗೆ ಮನೆಯೂಟ ನೀಡಲು ಆಗಲ್ಲ. ಮೂರನೇಯದಾಗಿ ಆರೋಗ್ಯ ತಪಾಸಣೆ ವೇಳೆಯೂ ದರ್ಶನ್ ಫಿಟ್ ಅಂಡ್ ಪೈನ್ ಆಗಿದ್ದಾರೆ ಹೀಗಾಗಿ ದರ್ಶನ್ ಗೆ ಮನೆ ಊಟ ಕೊಡುವ ಅವಶ್ಯಕತೆ ಇಲ್ಲವೆಂದು ಕಾರಾಗೃಹ ಇಲಾಖೆ ಡಿಜಿ ಮಾಲಿನಿ ಕೃಷ್ಣಮೂರ್ತಿ ಮತ್ತು ಜೈಲಾಧಿಕಾರಿಗಳು ಕೊಟ್ಟಿರೋ ವರದಿಯಲ್ಲಿ ತಿಳಿಸಲಾಗಿದೆ. ಕಾರಾಗೃಹ ಇಲಾಖೆಯಿಂದ ಜೈಲಿನ ವಕೀಲರಿಗೆ ವರದಿ ತಲುಪಿತ್ತು. ಇದೀಗ ವರದಿ ಕೋರ್ಟ್ಗೆ ಸಲ್ಲಿಸಲಾಗಿದ್ದು ನಟ ದರ್ಶನ್ ಗೆ ಸದ್ಯ ಜೈಲೂಟವೇ ಗತಿಯಾಗಿದೆ.