ಮಂಡ್ಯ: ದರ್ಶನ್ ಅವರು ಮಂಡ್ಯದಲ್ಲಿ ಸ್ಟಾರ್ ಚಂದ್ರು ಪರ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರದ ವೇಳೆ ದರ್ಶನ್ ನೋಡಲು ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ನೆರೆದಿದ್ದರು. ಅವರನ್ನು ನೋಡಿ ಅಭಿಮಾನಿಗಳು ಖುಷಿಯಾಗುತ್ತಿದ್ದಾರೆ. ಮುಖ್ಯಮಂತ್ರಿ ಚಂದ್ರು ಮಾತನಾಡುವಾಗ ದರ್ಶನ್ ಪರ ಘೋಷಣೆ ಕೂಗಲಾಗುತ್ತಿತ್ತು. ಇದು ದರ್ಶನ್ಗೆ ಇಷ್ಟವಾಗಿಲ್ಲ. ಈ ಬಗ್ಗೆ ಅವರು ಓಪನ್ ಆಗಿ ಮಾತನಾಡಿದ್ದಾರೆ. ‘ಹಿರಿಯರು ಮಾತನಾಡುವಾಗ ಎರಡು ನಿಮಿಷ ಕಾಲಾವಕಾಶ ನೀಡಬೇಕು. ಇಲ್ಲಾ ಅಂದ್ರೆ ತಪ್ಪಾಗುತ್ತೆ ಚಿನ್ನಾ’ ಎಂದರು ದರ್ಶನ್ . ಏಪ್ರಿಲ್ 26ರಂದು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದೆ.