ಮೈಸೂರು : ಯದುವೀರ್ ಅವರು ರಾಜಕೀಯಕ್ಕೆ ಬಂದಿಲ್ಲ. ನಾವು ಕರೆದುಕೊಂಡು ಬಂದಿದ್ದೇವೆ ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು. ಮೈಸೂರಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ಎಂಬುದು ಅವರಿಗೆ ರಕ್ತಗತವಾಗಿ ಬಂದಿರೋದು. ಯದುವೀರ್ ಅವರನ್ನು ನಾನು ಜನ ಪ್ರತಿನಿಧಿಯಾಗಿ ಈ ಹಿಂದೇನೇ ನೋಡಿದ್ದೆ. ಅವರು ಕನ್ನಡ ಶಾಲೆಗಳ ಅಭಿವೃದ್ಧಿಗೆ ಕಲಿಸು ಎಂಬ ಒಂದು ಸಂಸ್ಥೆ ಕಟ್ಟಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ಈ ಹಿಂದೆಯೇ ಶ್ರಮಿಸಿದವರು ಯದುವೀರ್. ಯುವ ಮೋರ್ಚಾದಿಂದ ಇನ್ನಷ್ಟು ಕೆಲಸಗಳು ಆಗಬೇಕು. ಛಲದಿಂದ ಪಕ್ಷ ಸಂಘಟನೆ ಮಾಡಬೇಕು. ನರೇಂದ್ರ ಮೋದಿಯವರಿಗೆ ಕೈ ಜೋಡಿಸಿದರೆ ಸಾಕು. ನಿಮ್ಮ ಪ್ರತಿನಿಧಿಯಾಗಿ ಯದುವೀರ್ ಕೆಲಸ ಮಾಡುತ್ತಾರೆ. ಮಹಾರಾಜರ ಕೊಡುಗೆಗಳು ನಮ್ಮ ರಾಜ್ಯಕ್ಕೆ ಅಪಾರ. ಹಾಗಿನ ಮೈಸೂರು ಮಹಾರಾಜರು ಯಾವುದೇ ಪ್ರತಿ ಫಲಾಪೇಕ್ಷೆ ಇಲ್ಲದೆ ಜನ ಸೇವೆ ಮಾಡಿದ್ದರು. ಇವತ್ತಿನ ರಾಜಕಾರಣಿಗಳು ಒಂದು ರೂಪಾಯಿ ಖರ್ಚು ಮಾಡಿ 10 ರೂಪಾಯಿ ತೋರಿಸ್ತಾರೆ. ಹಿಂದಿನ ಮಹಾರಾಜರ ಗುಣವೇ ಯದುವೀರ್ ಅವರಿಗಿದೆ.ಅವರನ್ನ ಗೆಲ್ಲಿಸಿಕೊಂಡು ಬರಬೇಕು ಎಂದು ಹೇಳಿದರು.