ಪ್ರತಿನಿಧಿ ವರದಿ ಹನೂರು
ತಾಲೂಕಿನ ಯೋಧರ ಗ್ರಾಮವೆಂದೇ ಪ್ರಸಿದ್ಧಯಾಗಿರುವ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಸುಳ್ವಾಡಿ ಗ್ರಾಮದ ಯೋಧ ಹೃದಯಘಾತದಿಂದ ಕರ್ತವದಲ್ಲಿರುವಾಗಲೇ ಮೃತಪಟ್ಟಿದ್ದಾರೆ.
ಸುಳ್ಳುವಾಡಿ ಗ್ರಾಮದ ಅಂತೋನಿ ಸ್ವಾಮಿ ಮತ್ತು ಅಂತೋನಿ ಆಮ್ಮಾಳ ಅವರ ದ್ವಿತೀಯ ಪುತ್ರ ಜ್ಞಾನ ಪ್ರಕಾಶ್ ಅವರು ಕಳೆದ 13 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಪಂಜಾಬ್ ಗಡಿಯಲ್ಲಿ ಕರ್ತವ್ಯದಲ್ಲಿರುವಾಗಲೇ ಗುರುವಾರ ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಪಾರ್ಥಿವ ಶರೀರವನ್ನು ಪಂಜಾಬ್ ರಾಜ್ಯದಿಂದ ಸ್ವ ಗ್ರಾಮಕ್ಕೆ ತರಬೇಕಿದೆ. ಮೃತ ಯೋಧರು ತಂದೆ, ತಾಯಿ, ಅಣ್ಣ, ತಂಗಿ, ಹೆಂಡತಿ ಹಾಗೂ ಏಳು ವರ್ಷದ ಮಗನನ್ನು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.