ಪ್ರತಿನಿಧಿ ವರದಿ ನಾಪೋಕ್ಲು
ಕದನೂರು ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ನರ್ಸರಿಯಲ್ಲಿದ್ದ ಸುಮಾರು 35 ಸಾವಿರಕ್ಕೂ ಹೆಚ್ಚಿನ ಹಣ್ಣಿನ ಗಿಡ ಮತ್ತು ಇತರ ಕಾಡು ಗಿಡಗಳು ಪ್ರವಾಹದಿಂದ ಕೊಳೆತು ನಾಶವಾಗಿದೆ.
ನಡು ತೋಪುವಿನಲ್ಲಿ ಸೀಬೆ, ನೇರಳೆ, ನೆಲ್ಲಿ, ನಿಂಬೆ, ಕೈ ಹುಳಿಯಂತಹ ಹಲವು ಬಗೆಯ ಹಣ್ಣಿನ ಗಿಡಗಳು ಮತ್ತು ಕಾಡು ಮರಗಳ ಗಿಡಗಳು ಸರ್ಕಾರಿ ರಿಯಾಯಿತಿಯ 3 ರೂ. ಮತ್ತು 6 ರೂ. ದರದಲ್ಲಿ ರೈತರಿಗೆ ವಿತರಣೆ ಮಾಡಲು ಸುಮಾರು 55 ಸಾವಿರ ಗಿಡಗಳನ್ನು ಬೆಳೆಸಿ ಪೋಷಿಸಲಾಗಿತ್ತು. 20ರಿಂದ 25ಸಾವಿರ ಗಿಡಗಳು ಈ ವರೆಗೆ ವಿತರಣೆಯಾಗಿದ್ದು, ಉಳಿದ ಅಂದಾಜು 30ರಿಂದ 35 ಸಾವಿರ ಗಿಡಗಳು ಪ್ರವಾಹಕ್ಕೆ ಸಿಲುಕಿ ಕೊಳೆತುಹೋಗಿದೆ ಎಂದು ವಲಯ ಅರಣ್ಯ ಅಧಿಕಾರಿ ನಿವೇದಿತ, ಉಪವಲಯ ಅರಣ್ಯಾದಿಕಾರಿ ಕೆ.ಇ.ಹಮೀದ್ ಮಾಹಿತಿ ನೀಡಿದ್ದಾರೆ.
ಫೋಟೋ 1 ಎಂಡಿಕೆ 04: ಕದನೂರು ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ನರ್ಸರಿಯಲ್ಲಿನ ಗಿಡಗಳು ಪ್ರವಾಹದಲ್ಲಿ ಮುಳುಗಿರುವುದು.