ರೈತ ಕಲ್ಯಾಣ ಸಂಘಟನೆಯ ತಾಲೂಕು ಅಧ್ಯಕ್ಷ ಉಮೇಶ್ ಮನವಿ
ಪ್ರತಿನಿಧಿ ವರದಿ ಎಚ್.ಡಿ.ಕೋಟೆ
ರಾಜ್ಯ ರೈತ ಕಲ್ಯಾಣ ಸಂಘಟನೆಯ ತಾಲೂಕು ಅಧ್ಯಕ್ಷ ಉಮೇಶ್ ನೇತೃತ್ವದಲ್ಲಿ ರೈತರ ಸಮಸ್ಯೆ ಹಾಗೂ ಸರ್ಕಾರದಿಂದ ಬರುವ ಸವಲತ್ತುಗಳು ರೈತರಿಗೆ ಸಿಗಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿ ಜಯರಾಮ್ ಅವರಿಗೆ ಮನವಿಸಲ್ಲಿಸಿದರು.
ಸರ್ಕಾರದಿಂದ ಬರುವ ಯೋಜನೆಗಳ ಬಗ್ಗೆ ರೈತರಿಗೆ ನೀವು ಮಾಹಿತಿ ನೀಡಬೇಕು. ಯಂತ್ರೋಪಿಕರಣಗಳು ಕೂಡ ತಾಲೂಕಿನಲ್ಲಿ ಉಳ್ಳವರ ಪಾಲಾಗುತ್ತಿದೆ. ಪ್ರಾಮಾಣಿಕ ರೈತರಿಗೆ ಮೋಸ ಆಗದಂತೆ ನೀವು ಕೆಲಸ ನಿರ್ವಹಿಸಬೇಕು. ಸರ್ಕಾರದಿಂದ ರೈತರಿಗೆ ಯಾವುದೇ ಸವಲತ್ತುಗಳು ಬಂದರೆ ರೈತರಿಗೆ ನೀವು ಮೊದಲು ತಿಳಿಸಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆ ಅಧಿಕಾರಿ ಜಯರಾಮ್ ಮಾತನಾಡಿ, ರೈತರಿಗೆ ಎಲ್ಲ ಮಾಹಿತಿಯನ್ನು ನೀಡುತ್ತಿದ್ದೇವೆ. ಇಬ್ಬರೂ ರೈತರಿಗೆ ಯಂತ್ರೋಪಕರಣ ಕೂಡ ನೀಡಿದ್ದೇವೆ. ಸರ್ಕಾರದಿಂದ ರೈತರಿಗೆ ಸಬ್ಸಿಡಿ ದರದಲ್ಲಿ ಔಷಧ, ಗೊಬ್ಬರ, ಬಿತ್ತನೆ ಬೀಜ ನೀಡುತ್ತಿದ್ದೇವೆ. ಏನೇ ಸಮಸ್ಯೆ ಇದ್ದರೂ ನನಗೆ ತಿಳಿಸಿ. ರೈತರಿಗೆ ಅನ್ಯಾಯ ಆಗದಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
ರೈತ ಕಲ್ಯಾಣ ಸಂಘಟನೆಯ ಪದಾಧಿಕಾರಿಗಳು ಮತ್ತು ಮುಖಂಡರು ಇದ್ದರು.