ಗೋಣಿಕೊಪ್ಪ: ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ಡೆಂಘೆ ರೋಗ ನಿಯಂತ್ರಣದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು.
7 ನೇ ತರಗತಿಯ ವಿದ್ಯಾರ್ಥಿಗಳಾದ ಬಿ ಎಸ್. ತನಿಷ್ಕ, ಭೂಮಿಕ, ಟಿಶ, ಪ್ರಶೋಬ್, ವಿಶ್ಮಾರೈ ಸೃಜನಶೀಲ ನಾಟಕದ ಮೂಲಕ ಸಂದೇಶ ಸಾರಿದರು. ಹಲವಾರು ಕಲಿಕೋಪಕರಣಗಳನ್ನು ಬಳಸಿ ಮನ ಮುಟ್ಟುವಂತೆ ಮಾಡಿದರು.
ಸಂಸ್ಥಾಪಕಿ ಡಾ. ಶಾಂತಿ ಆಚ್ಚಪ್ಪ ಹಾಗೂ ಪ್ರಾಂಶುಪಾಲ ಪುಷ್ಪ, ಸಂಯೋಜಕಿ ನೆಲ್ಲಮಕ್ಕಡ ಸರಿತ, ವಿಜ್ಞಾನ ಶಿಕ್ಷಕರಾದ ಚಂದನ ಮತ್ತು ಶರಣ್ಯ ಕ್ರಿಯಾಶೀಲ ಮಾರ್ಗದರ್ಶನ ನೀಡಿದರು.
ಫೋಟೋ 16 ಜಿಕೆಪಿ 03 ; ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ಡೆಂಘೆ ರೋಗ ನಿಯಂತ್ರಣದ ಬಗ್ಗೆ ಜಾಗೃತಿ ನಡೆಯಿತು.