ಬೆಳಗಾವಿ : ಬೆಳಗಾವಿಯಲ್ಲಿ ಆಗಾಗ ನಾಡದ್ರೋಹಿ ಚಟುವಟಿಕೆಗಳು ಆಗುತ್ತಿರುತ್ತದೆ. ಈ ಹಿನ್ನಲೆ ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗಡಿ ಆಯೋಗದ ಅಧ್ಯಕ್ಷ ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಗಡಿ ಸಮಸ್ಯೆ ಕುರಿತು ಕನ್ನಡ ಪರ ಸಂಘಟನೆಗಳಿಂದ ಸಮಸ್ಯೆಯನ್ನ ಆಹ್ವಾಲಿಸಲಾಗಿದೆ. ಈ ವೇಳೆ ಗಡಿ ಸಂರಕ್ಷಣಾ ಪ್ರಾದೇಶಿಕಾ ಕಚೇರಿ ಬೆಳಗಾವಿಗೆ ಸ್ಥಳಾಂತರ ಆಗಬೇಕು. ಕಡ್ಡಾಯ ಕನ್ನಡ ಬಳಕೆ, ಗಡಿ ವಿಚಾರ, ಕನ್ನಡ ರಾಜ್ಯೋತ್ಸವ ಆಚರಣೆ, ಎಂಇಎಸ್ ಮತ್ತು ಶಿವಸೇನೆ ಪುಂಡಾಟಿಕೆ ಕುರಿತು ಚರ್ಚೆ ನಡೆಸಲಾಗಿದೆ.
ಇನ್ನು ಗಡಿ ವಿಚಾರದ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಎಂಇಎಸ್, ಶಿವಸೇನೆ ಸಂಘಟನೆಯನ್ನ ರಾಜ್ಯದಲ್ಲಿ ನಿಷೇಧ ಮಾಡುವಂತೆ ಕನ್ನಡಪರ ಹೋರಾಟಗಾರರು ಒತ್ತಾಯಿಸಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಎಸ್ಪಿ ಭೀಮಾಶಂಕರ್ ಗುಳೇದ್, ಜಿಪಂ ಸಿಇಒ ರಾಹುಲ್ ಶಿಂಧೆ, ಕನ್ನಡಪರ ಹೋರಾಟಗಾರರು ಭಾಗಿಯಾಗಿದ್ದರು.
ಈ ಕುರಿತು ಮಾತನಾಡಿದ ಗಡಿ ಆಯೋಗದ ಅಧ್ಯಕ್ಷ ಶಿವರಾಜ್ ಪಾಟೀಲ್, ‘ ಬೆಳಗಾವಿಯಲ್ಲಿ ಪ್ರಾದೇಶಿಕ ಕಚೇರಿ ಸ್ಥಾಪನೆ ಮಾಡಲು ಸರ್ಕಾರ ನಿರ್ಧಾರ ಮಾಡಬೇಕು. ರಿಜಿನಲ್ ಆಫೀಸ್ ಸುವರ್ಣ ವಿಧಾನಸೌಧದಲ್ಲಿ ಮಾಡಿ ಗಡಿ ಆಯೋಗದ ಹೊಸ ಮೇಂಬರ್ಗಳನ್ನ ಮಾಡಬೇಕಾಗುತ್ತದೆ. ಜೊತೆಗೆ ಪ್ರಾದೇಶಿಕ ಕಚೇರಿ ಆದ ಮೇಲೆ ತಾತ್ಕಾಲಿಕವಾಗಿ ಬೆಳಗಾವಿಯ ಒಬ್ಬರನ್ನ ಆಯೋಗದ ಸದಸ್ಯರನ್ನಾಗಿ ಮಾಡುತ್ತೇವೆ. ನದಿ ಮತ್ತು ಗಡಿಗಳ ಬಗ್ಗೆ ಹಿತ ಕಾಯುವ ದೃಷ್ಟಿಯಿಂದ ಈ ಆಯೋಗ ಕೆಲಸ ಮಾಡುತ್ತದೆ.