ಪ್ರತಿನಿಧಿ ವರದಿ ಕೊಳ್ಳೇಗಾಲ
ಪಟ್ಟಣದ ನಾಯಕರ ದೊಡ್ಡ ಬಡಾವಣೆಯ ನಿವಾಸಿಗಳಿಗೆ 10ನೇ ವಾರ್ಡಿನ ನಗರಸಭಾ ಸದಸ್ಯ ಜಿ.ಪಿ.ಶಿವಕುಮಾರ್ ಸೋಮವಾರ ಹಸಿಕಸ ಮತ್ತು ಒಣಕಸವನ್ನು ಸಂಗ್ರಹಿಸುವ ಕಸದ ಬುಟ್ಟಿಗಳನ್ನು ವಿತರಿಸಿದರು.
ನಂತರ ಮಾತನಾಡಿ ಅವರು, ಹಸಿಕಸ ಹಾಗೂ ಒಣಕಸವನ್ನು ಮನೆಯಲ್ಲಿಯೇ ನಿತ್ಯ ಬೇರ್ಪಡಿಸಿ, ಕಸ (ತ್ಯಾಜ್ಯ)ಸಂಗ್ರಹಿಸುವ ಆಟೋ ಟಿಪ್ಪರ್ ವಾಹನಕ್ಕೆ ನೀಡುವ ಉದ್ದೇಶದಿಂದ ನಗರಸಭೆಯಿಂದ ಈ ಬುಟ್ಟಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.
ವಾರ್ಡ್ನ ನಿವಾಸಿಗಳು ತಮ್ಮ ಮನೆಯ ಕಸವನ್ನು ಬಡಾವಣೆಯ ಬೀದಿಗಳಲ್ಲಿ ಎಲ್ಲೆಂದರಲ್ಲಿ ಹಾಕಕೂಡದು. ಇದರಿಂದ ಪರಿಸರದಲ್ಲಿ ಅನೈರ್ಮಲ್ಯ ಉಂಟಾಗಿ ಅನಾರೋಗ್ಯ ವಾತವರಣ ನಿರ್ಮಾಣವಾಗುತ್ತದೆ. ಆದ್ದುದ್ದರಿಂದ ನಗರಸಭಾ ಆಡಳಿತ ಪಟ್ಟಣದ 31 ವಾರ್ಡ್ ಗಳಿಗೂ ಪರಿಸರ ಸಂರಕ್ಷಿಸುವ ಕುರಿತು ನಿವಾಸಿಗಳಿಗೆ ಕಸದ ಬುಟ್ಟಿಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿದೆ ಎಂದು ಹೇಳಿದರು.
ಹಸಿಕಸ ಸಂಗ್ರಹಿಸುವ ಬುಟ್ಟಿಗೆ ನಿವಾಸಿಗಳು ತರಕಾರಿ, ಕೈ ತೋಟದ ತ್ಯಾಜ್ಯ, ತೆಂಗಿನಕಾಯಿ ಚಿಪ್ಪು, ಮೊಟ್ಟೆ ಚಿಪ್ಪು, ತೆಂಗಿನಕಾಯಿ ನಾರು, ಮಾಂಸಹಾರಿ ಮೀನಿನ ತ್ಯಾಜ್ಯ, ಕೋಳಿ ರೆಕ್ಕೆ, ಸತ್ತ ಜಿರಳೆ ಸತ್ತಹಲ್ಲಿ, ಒಣಗಿರುವ ಹೂವು ಹಣ್ಣಿನಸಿಪ್ಪೆ, ಬೀಜ ಬಾಳೆಎಲೆ, ನೈಸರ್ಗಿಕ ನಾರಿನ ಪೊರಕೆ, ಕಾಫಿ ಮತ್ತು ಟೀ ಗಸಿ ಶೇಖರಿಸಬಗುದಾಗಿದೆ. ಒಣ ಕಸ ಸಂಗ್ರಹಣ ಬುಟ್ಟಿಯಲ್ಲಿ ಕಾಗದ, ರಟ್ಟು, ಪ್ಲಾಸ್ಟಿಕ್ ಕೈಚೀಲ, ಹಾಲಿನ ಕವರ್, ಎಣ್ಣೆ ಕವರ್, ಚಾಕೋಲೇಟ್ ಕವರ್, ಒಡವೆ ಗಾಜಿನ ಚೂರುಗಳು, ಲೋಹದ ವಸ್ತುಗಳು, ಮರದ ವಸ್ತುಗಳು, ರಬ್ಬರ್, ಸೀಸೆಗಳು, ಬಟ್ಟೆ, ಚಪ್ಪಲಿ, ಎಲೆಕ್ಟ್ರಿಕಲ್ ವಸ್ತುಗಳು, ಮಾತ್ರೆ ಕವರ್, ಬ್ಯಾಟರಿಗಳು, ಬಲ್ಪ್ ಗಳನ್ನು , ಟ್ಯೂಬ್ ಲೈಟ್ಗಳು, ಕೂದಲು, ಸ್ಯಾನಿಟರಿ, ನ್ಯಾಪ್ಕಿನ್ಗಳನ್ನು ಸಂಗ್ರಹಿಸಬಹುದಾಗಿದೆ.
Leave a comment