ಪ್ರತಿನಿಧಿ ವರದಿ ಎಚ್ ಡಿ ಕೋಟೆ
ತಾಲೂಕಿನ ಅಂತರ ಸಂತೆ ಹೋಬಳಿ ಡಿ ಬಿಕುಪ್ಪೆಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿರಿಜನರಿಗೆ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯ ಉಕೃತಿ ಮತ್ತು ವೇ ಫಾರ್ ಲೈಫ್ ನ ಸಹಯೋಗದೊಂದಿಗೆ ಡಿ.ಬಿ.ಕುಪ್ಪೆ, ಮಚ್ಚೂರು, ವಡಕನ ಮಾಳ, ಕಡೆಗದ್ದೆ ಸೇರಿದಂತೆ ಸುತ್ತ ಮುತ್ತಲಿನ ಹಾಡಿಗಳ ಗಿರಿಜನರಿಗೆ ಸುಮಾರು ರೂ. 1.500 ಬೆಲೆಯ ಆಹಾರದ ಕಿಟ್ಟು ಗಳನ್ನು ಭಾನುವಾರ ವಿತರಿಸಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಚಂದನ್ ಗೌಡ ಮಾತನಾಡಿ, ನಮ್ಮ ಸಂಸ್ಥೆಯು ತಾಲ್ಲೂಕಿನ ಹಾಡಿಗಳಲ್ಲಿ ಗಿರಿ ಜನರನ್ನು ಗುರುತಿಸಿ ಅವರಿಗೆ ಆಹಾರ ಕಿಟ್ಟನ್ನು 250 ಮಂದಿಗೆ ನೀಡಲಾಯಿತು. ಇತ್ತೀಚೆಗೆ ತಾಲ್ಲೂಕಿನ ಎಂ.ಕನ್ನೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸುಮಾರು ರೂ.25 ಲಕ್ಷದಲ್ಲಿ ಎರಡು ಶಾಲಾ ಕೊಠಡಿ ಯನ್ನು ಹಾಗೂ ಒಂದು ಅಡಿಗೆ ಕೋಣೆಯನ್ನು ನಿರ್ಮಿಸಿ ಕೊಡಲಾಗಿದೆ. ಕೊರೋನಾ ಸಮಯದಲ್ಲಿ ಸಂಚಾರಿ ವಿಜಯ್ ನೆನಪಿನ ಅಂಗವಾಗಿ ಗಿರಿ ಜನರಿಗೆ ಟಾರ್ಪಲ್ ನೀಡಲಾಗಿದೆ. ತಾಲ್ಲೂಕಿನ ಜಿಜಿ ಕಾಲೋನಿ ಇಂದಿರಾನಗರ ಶಾಲೆಗಳಲ್ಲಿ ಶಾಲಾ ಕೊಠಡಿ ಶೌಚಾಲಯ ಹಾಗೂ ನಲಿ-ಕಲಿ ಯ ಗೋಡೆಗಳ ಮೇಲೆ ಚಿತ್ರ ಬರಿಸಲಾಗಿದೆ. ಮುಂದಿನ ದಿನದಲ್ಲಿ ತಾಲ್ಲೂಕಿನಲ್ಲಿ ಇರುವ ಸರ್ಕಾರಿ ಶಾಲೆಗಳಿಗೆ ನಮ್ಮ ಸಂಸ್ಥೆಯ ವತಿಯಿಂದ ಪೀಠೋಪಕರಣಗಳನ್ನು ನೀಡಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.
ಈ ವೇಳೆಯಲ್ಲಿ ಗಾಯತ್ರಿ, ಲತೀಶ್, ಮನ್ವಿತಾ, ವೃಂದಾ ಹಾಜರಿದ್ದರು