ಬೆಂಗಳೂರು: ಬಾಗಿಲಿಗೆ ಬಂತು ಸರ್ಕಾರ-ಸೇವೆಗೆ ಇರಲಿ ಸಹಕಾರ ಹೆಸರಿನಲ್ಲಿ ಇಂದು ಆರ್.ಆರ್.ನಗರ, ಯಶವಂತಪುರ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನ ಭಾರತಿ ಮೈದಾನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಅಹವಾಲು ಸ್ವೀಕರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಮುನಿರತ್ನ, S.T.ಸೋಮಶೇಖರ್, ಸಂಸದ ಡಿಕೆ ಸುರೇಶ್ ಭಾಗಿಯಾಗಿದ್ದು ಬಿಬಿಎಂಪಿ, ಬಿಡಿಎ, ಬಿಎಂಆರ್ಸಿಎಲ್, ಬಿಎಂಆರ್ಡಿಎ, ಬೆಸ್ಕಾಂ, ಜಲಮಂಡಳಿ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗ್ಯಾರಂಟಿ ಯೋಜನೆಗಳ ಸಮಸ್ಯೆ ಕುರಿತು ಸ್ಥಳದಲ್ಲೇ ಡಿಕೆ ಶಿವಕುಮಾರ್ ಪರಿಹಾರ ನೀಡಲಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ S.T.ಸೋಮಶೇಖರ್, ಬೆಂಗಳೂರಿನ ಉಸ್ತುವಾರಿ ವಹಿಸಿಕೊಂಡ ಡಿಸಿಎಂ ಜನರ ನಿರೀಕ್ಷೆ ಈಡೇರಿಸೋ ಕೆಲಸ ಮಾಡ್ತಿದ್ದಾರೆ. ಇದುವರೆಗೆ ಎಲ್ಲಾ ಕ್ಷೇತ್ರದ ಕಾರ್ಯಕ್ರಮ ಸಕ್ಸಸ್ ಆಗಿದೆ. ಮನವಿ ಬಗ್ಗೆ ಕೆಲಸಗಳು ಆಗ್ತಿವೆ. ನನ್ನ ಕ್ಷೇತ್ರದ 5 ಕಸದ ಘಟಕಗಳನ್ನ ಬೇರೆಡೆ ಶಿಫ್ಟ್ ಗೆ ಮನವಿ ಮಾಡಿದ್ದೇ, ಬಜೆಟ್ ನಲ್ಲಿ ಬೇರೆಡೆ ಕಸದ ಘಟಕ ಶಿಫ್ಟ್ ಗೆ ಕ್ರಮ ಕೈಗೊಂಡಿದ್ದಾರೆ. ಕುಡಿಯುವ ನೀರಿನ ಹಾಹಾಕಾರ ತಪ್ಪಿಸೋಕು ಕೆಲಸ ಮಾಡ್ತಿದ್ದಾರೆ. ಡಿ.ಕೆ.ಸುರೇಶ್ ಕೂಡ ಆನೇಕಲ್ ಸುತ್ತಮುತ್ತ ಕೆಲಸ ಮಾಡ್ತಿದ್ದಾರೆ. 110 ಹಳ್ಳಿಗಳಿಗೆ ನೀರು ಕೊಡೋ ಕೆಲಸಕ್ಕೂ ಕೆಲಸವಾಗ್ತಿದೆ. ಮಾರ್ಚ್ ಅಂತ್ಯದಲ್ಲಿ ಕಾವೇರಿ 5ನೇ ಹಂತದ ಸಮಸ್ಯೆ ಕ್ಲಿಯರ್ ಆಗುತ್ತೆ. ಕನಕಪುರ ರಸ್ತೆಯನ್ನ ಡಿ.ಕೆ.ಸುರೇಶ್ ಅವರು ಅಭಿವೃದ್ಧಿ ಮಾಡಿದ್ದಾರೆ ಎಂದರು.