ಗೋಣಿಕೊಪ್ಪ: ಕಾವೇರಿ ಕಾಲೇಜು ಇತಿಹಾಸ ವಿಭಾಗದ ಮುಖ್ಯಸ್ಥೆ ಮೂರೀರ ಸಿ.ಸೀಮ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ದೊರೆಕಿದೆ.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರಾಧ್ಯಾಪಕಿ ಡಾ.ಕೋಡಿರ ಮೀನಾಕ್ಷಿ ಲೋಕೇಶ್ ಮಾರ್ಗದರ್ಶನದಲ್ಲಿ ಮಂಡಿಸಿದ “ಕೊಡಗಿನ ಕೊಡವ ಭಾಷಿಕ ಸಮುದಾಯಗಳ ಚಾರಿತ್ರಿಕ ಅಧ್ಯಯನ – ಸಮಾಜ ಮತ್ತು ಸಂಸ್ಕೃತಿ “ಎಂಬ ಮಹಾಪ್ರಬಂಧಕ್ಕೆ ಪದವಿ ನೀಡಿದೆ. ಇವರು ಬಾಳುಗೋಡು ಗ್ರಾಮದ ಮೂರೀರ ಮಿಟ್ಟು ಚಿಟ್ಟಿಯಪ್ಪ, ಮಲ್ಲಿಗೆ ದಂಪತಿ ಪುತ್ರಿ.
ಫೋಟೋ 9 ಜಿಕೆಪಿ 01 ; ಮೂರೀರ ಸಿ. ಸೀಮ