ಪ್ರತಿನಿಧಿ ವರದಿ ಪಾಂಡವಪುರ
ಕೆನ್ನಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜೆಡಿಎಸ್ ಹಾಗೂ ಇತರೆ ಪಕ್ಷದ ಮುಖಂಡರ ಸಹಕಾರದಿಂದ ನೂತನ ಅಧ್ಯಕ್ಷರಾಗಿ ಕೆ.ಎನ್.ದೊಡ್ಡೇಗೌಡ ಅವಿರೋಧ ಆಯ್ಕೆಯಾಗಿದ್ದಾರೆ.
ಕೆನ್ನಾಳು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಕೆ.ಎನ್.ದೊಡ್ಡೇಗೌಡ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಸಹಾಯಕ ಅಧಿಕಾರಿ ನಿರ್ಮಲ ಅವರು ಕೆ.ಎನ್.ದೊಡ್ಡೇಗೌಡರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಘೋಷಿಸಿದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಕೆ.ಎಸ್.ದಯಾನಂದ್ ಅವರು ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ, ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಿತು.
ದೊಡ್ಡೇಗೌಡ ಮಾತನಾಡಿ, ಜನಪ್ರತಿನಿಧಿಗಳು ಹಾಗೂ ಸೊಸೈಟಿಯ ಎಲ್ಲ ನಿರ್ದೇಶಕರ ಸಹಕಾರದಿಂದ ಪಕ್ಷಾತೀತವಾಗಿ ಸಲಹೆ ಸ್ವೀಕರಿಸಿ, ಅಭಿವೃದ್ಧಿ ಮಾಡುತ್ತೇನೆ ಎಂದು ತಿಳಿಸಿದರು.
ಚುನಾವಣೆ ಪ್ರಕ್ರಿಯೆಯಲ್ಲಿ ಕೆನ್ನಾಳು ಸೊಸೈಟಿ ಉಪಾಧ್ಯಕ್ಷೆ ಕೆ.ಟಿ.ಪದ್ಮ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ.ಎಸ್.ದಯಾನಂದ್, ಸೊಸೈಟಿ ನಿರ್ದೇಶಕ ಕೆ.ಪಿ.ನಟರಾಜು, ತಿಬ್ಬಮ್ಮ( ಪದ್ಮಮ್ಮ), ಕೆ.ಸಿ.ಲಕ್ಷ್ಮಣ, ಕೆ.ಕೆ.ಕಾಳಯ್ಯ, ಎಂ.ಚಿಕ್ಕಣ್ಣ, ಜೆಡಿಎಸ್ ಯುವ ನಾಯಕ ಮಂಜು, ವಿ.ಕೆ.ಮರಿಸ್ವಾಮೀಗೌಡ, ಮಾಜಿ ನಿರ್ದೇಶಕ ಮಂಜುನಾಥ್, ಹರಳಹಳ್ಳಿ ಶಂಕರ್ ಹಾಜರಾಗಿದ್ದರು.