ಪ್ರತಿನಿಧಿ ವರದಿ ಹನೂರು
ಹೆಣ್ಣಾಗಲಿ, ಗಂಡಾಗಲಿ ನಿಗದಿತ ವಯಸ್ಸಿಗಿಂತ ಮುಂಚಿತವಾಗಿ ಮದುವೆಯಾಗಬಾರದು ಅದು ಬಾಲ್ಯ ವಿವಾಹವಾಗುತ್ತದೆ ಎಂದು ರಾಮಾಪುರ ಪೊಲೀಸ್ ಠಾಣೆಯ ಎಎಸ್ಐ ನಿಂಗರಾಜು ಹೇಳಿದರು.
ತಾಲೂಕಿನ ಬಸಪ್ಪನದೊಡ್ಡಿ ಸರ್ಕಾರಿ ಶಾಲೆಯಲ್ಲಿ ರಾಮಾಪುರ ಪೊಲೀಸ್ ಠಾಣೆಯ ವತಿಯಿಂದ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಯಿಂದಾಗಿ ಅನೇಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಕಾನೂನು ಮೀರಿ ಯಾವುದು ನಡೆಯಲು ಅವಕಾಶ ನೀಡಬಾರದು ಎಂದರು.
ಮಹಿಳಾ ಪೇದೆ ಸ್ಮೃತಿ ಮಾತನಾಡಿ, ಸರ್ಕಾರದ ನಿಯಮದಂತೆ ತಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ‘ಗುಡ್ ಟಚ್ ಬ್ಯಾಡ್ ಟಚ್’ ಬಗ್ಗೆ ತಾವು ತಿಳಿದುಕೊಳ್ಳಲು ಮುಂದಾಗಬೇಕು ಅಲ್ಲದೇ ಪೋಕ್ಸೋ ದಂತಹ ಕಠಿಣ ಕಾನೂನು ಜಾರಿಯಾಗಿದೆ ಅದರ ಪರಿಣಾಮವನ್ನು ಸಹ ತಿಳಿಸಿದರು.
ಮುಖ್ಯ ಪೇದೆ ನಾಗರಾಜು ಮಾತನಾಡಿ, ಚಿಕ್ಕ ಮಕ್ಕಳು ಯಾವುದೇ ಕಾರಣಕ್ಕೂ ವಾಹನ ಚಲಾವಣೆ ಮಾಡಬಾರದು. ಈಗಾಗಲೇ ಕಟ್ಟು ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಹೆಲ್ಮೆಟ್ ಬಳಸುವಂತೆ ಬೇರೆಯವರಿಗೆ ತಿಳಿಸಬೇಕು. ಆ ಮೂಲಕ ಪ್ರಾಣ ಉಳಿಸಬಹುದು ಜತೆಗೆ ಮಕ್ಕಳಿಗೆ ಇರುವಂತಹ ಹಕ್ಕುಗಳನ್ನು ತಾವೆಲ್ಲರೂ ತಿಳಿದುಕೊಳ್ಳಬೇಕು ಎಂದರು.
ಶಾಲಾ ಶಿಕ್ಷಕ ಸೋಮಣ್ಣ, ದೊರೆಸ್ವಾಮಿ, ಆನಂದ್, ಪುಟ್ಟುರಾಮು, ಮುತ್ತಮ್ಮ ಸುಧಾಮಣಿ, ಮಾಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.