ಪ್ರತಿನಿಧಿ ವರದಿ ಕೆ.ಆರ್.ಪುರ
ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿದರಹಳ್ಳಿ ಹೋಬಳಿ ಘಟಕದ ಕುರುಡು ಸೋಣೆನಹಳ್ಳಿ ಗ್ರಾಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ವಿಜೃಂಭಣೆಯಿಂದ ಆಚರಿಸಲಾಯಿತು.
ಶಾಲಾ ಮಕ್ಕಳಿಗೆ ಪೆನ್ನು ಪುಸ್ತಕಗಳು ವಿತರಣೆ ಹಾಗೂ 350 ಜನರಿಗೆ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜಣ್ಣ, ದಲಿತಪರ ಹೋರಾಟಗಾರ ಬೆಳ್ತೂರು ವೆಂಕಟೇಶ್, ಕಾಡುಗೋಡಿ ಸೊಣ್ಣಪ್ಪ, ವೈ.ಎಸ್.ಕೆ ಸಂತೋಷ, ವೆಂಕಟೇಶ್, ಊರಿನ ಗ್ರಾಮಸ್ಥರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.