ಪ್ರತಿನಿಧಿ ವರದಿ ಕೊಳ್ಳೇಗಾಲ
ಪಟ್ಟಣದ ಭೀಮನಗರ ಬಡಾವಣೆ ನಿವಾಸಿ ಡಾ.ಎಂ.ಗುರುಮೂರ್ತಿ ಅವರು ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2024ರ ಸಂಬಂಧ ಯುವ ದಸರಾ ಉಪ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ದಸರಾ ಉನ್ನತ ಮಟ್ಟದ ಸಮಿತಿ ಸಭೆ ನಿರ್ಣಯದಂತೆ ದಸರಾ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ಆಚರಿಸುವ ಸಂಬಂಧ ಸೆ.24 ರಿಂದ ಸೆ.30ರವರೆಗೆ ನಡೆಯುವ ಯುವ ಸಂಭ್ರಮ ಉಪ ಸಮಿತಿಗೆ ಡಾ.ಎಂ.ಗುರುಮೂರ್ತಿ ಅವರನ್ನು ಅಧಿಕಾರೇತರ ಅಧ್ಯಕ್ಷರನ್ನಾಗಿ ನೇಮಕಗೊಳಿಸಿದ್ದು, ಅಂತೆಯೇ ಇಬ್ಬರು ಉಪಾಧ್ಯಕ್ಷರು ಹಾಗೂ 20 ಸದಸ್ಯರನ್ನು ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಾರ್ಯಾಲಯ ಸೋಮವಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ.