ಚೊಟ್ಟನಹಳ್ಳಿ ಮಹದೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜನೆ
ಪ್ರತಿನಿಧಿ ವರದಿ ಮದ್ದೂರು
ತಾಲೂಕಿನ ಚೊಟ್ಟನಹಳ್ಳಿ ಗ್ರಾಮದ ಶ್ರೀ ಮಲೈ ಮಹದೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ 39ನೇ ವರ್ಷದ ಮಹದೇಶ್ವರಸ್ವಾಮಿಯ ಉತ್ಸವ ಮತ್ತು 3ನೇ ವರ್ಷದ ಭಾರಿ ದನಗಳ ಮತ್ತು ಜನಗಳ ಜಾತ್ರೆಗೆ ಅದ್ದೂರಿ ಚಾಲನೇ ದೊರೆತಿದೆ.
ದೇಗುಲದ ಆವರಣ ತಳಿರು ತೋರಣಗಳು ಮತ್ತು ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ದನಗಳ ಜಾತ್ರೆ ಭಕ್ತರ ಕಣ್ಮನ ಸೆಳೆಯುತ್ತಿವೆ. ಜಾತ್ರೆಯಲ್ಲಿ 30 ಸಾವಿರದಿಂದ 3.50 ಲಕ್ಷ ಬೆಳೆ ಬಾಳುವ ಹಳ್ಳಿಕಾರ್ ಸೇರಿದಂತೆ ಇತರ ರಾಸುಗಳು ದೊರೆಯುತ್ತವೆ. ರಾಸುಗಳಿಗೆ ಕುಡಿಯುವ ನೀರು ಮತ್ತು ಮೇವಿನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಮಾ. 24ರವರೆಗೆ ಜಾತ್ರೆ ನಡೆಯಲಿದ್ದು, ವಿವಿಧ ದಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಾತ್ರೆಯಲ್ಲಿ ಮೈಸೂರು ರಾಜ ಮನೆತನದವರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ ಎಂದು ದೇಗುಲದ ಪ್ರದಾನ ಅರ್ಚಕ ಬಿ.ಸಿ. ದೇವರಾಜು ತಿಳಿಸಿದರು.
ಸಂಕ್ರಾಂತಿ ಸಮಯದಲ್ಲಿ ಮದ್ದೂರು ತಾಲ್ಲೂಕಿನ ಚಿಕ್ಕಂಕನಹಳ್ಳಿ ನಂದಿ ಬಸವೇಶ್ವರ ಸ್ವಾಮಿಯ ದನಗಳ ಜಾತ್ರೆ ಬಿಟ್ಟರೆ ಬೇರೆ ಕಡೆ ದನಗಳ ಜಾತ್ರೆ ನಡೆಯುವುದಿಲ್ಲ. ಚೊಟ್ಟನಹಳ್ಳಿ ಗ್ರಾಮದ ಮಲೈ ಮಹದೇಶ್ವರ ಸ್ವಾಮಿಯ ಸನ್ನಿದಾನದಲ್ಲಿ ದನಗಳ ಜಾತ್ರೆ ಸಂಘಟಿಸಿರುವುದರಿಂದ ಈ ಭಾಗದ ರೈತರಿಗೆ ರಾಸುಗಳನ್ನು ಮಾರಾಲು ಮತ್ತು ಕೊಂಡುಕೊಳ್ಳಲು ಸಹಾಯವಾಗಿದೆ. ಇಂಥ ಜಾತ್ರೆಗಳು ಸಾಂಗವಾಗಿ ನಡೆಯಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಹಕರಿಸಬೇಕು. ಗ್ರಾಮಾಂತರ ಪ್ರದೇಶದಿಂದ ಸಾರಿಗೆ ಸೌಲಭ್ಯ ಒದಗಿಸಬೇಕು ಎಂದು ಪ್ರಗತಿಪರ ರೈತ ಗೂಳೂರು ನಾಗರಾಜು ತಿಳಿಸಿದರು.
ಪೋಟೋ
ಶ್ರೀ ಮಲೈ ಮಹದೇಶ್ವರ ಸ್ವಾಮಿ ದೇವರನ್ನು ವಿಶೇಷವಾಗಿ ಅಲಂಕಾರ ಮಾಡಿರುವುದು
ಪೋಟೋ
ದನಗಳ ಜಾತ್ರೆಯಲ್ಲಿ ಕಟ್ಟಿರುವ ದನಗಳ ಸಾಲು