ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎಂದು ಹೇಳಲಾಗುವ ಬಹುಕೋಟಿ ಹಗರಣ ಸಂಬಂಧ ಇಂದು ಮೈಸೂರು ಮುಡಾ ಕಚೇರಿಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಹತ್ವದ ದಾಖಲೆಗಳ ಪರಿಶೀಲನೆ ಮಾಡುತ್ತಿರುವ ED ಅಧಿಕಾರಿಗಳು, ಬದಲಿ ನಿವೇಶನದ ದಾಖಲೆಗಳನ್ನ ಕೇಳಿದ್ದಾರೆ. ಈ ವೇಳೆ ಮುಡಾ ಅಧಿಕಾರಿಗಳು ನಕಲು ಪ್ರತಿಗಳನ್ನು ನೀಡಿದ್ದು, ಈ ವೇಳೆ ED ತಂಡ ನಕಲು ಪ್ರತಿ ಸಾಕು, ಮೂಲ ಪ್ರತಿಯೇ ಬೇಕು ಎಂದು ಕೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ ಮುಡಾ ಕಾರ್ಯದರ್ಶಿ ಪ್ರಸನ್ನ ಕುಮಾರ್ ಅವರನ್ನು ಮೂಲ ದಾಖಲೆ ತರಲು ಹೊರಗೆ ಕಳುಹಿಸಿದ್ದಾರೆ.
ಇನ್ನು ಪಾರ್ವತಿ ಸಿದ್ದರಾಮಯ್ಯ ಕೇಸ್ ಸಂಬಂಧ 2004 ರಿಂದ 2023ರವರೆಗಿನ ಮೂಲ ದಾಖಲೆಗಳನ್ನು ತಕ್ಷಣವೇ ಕೊಡಿ ಎಂದಿರುವ ಇಡಿ ಅಧಿಕಾರಿಗಳು, 50:50 ವಿಚಾರ ಏನು? ಇಲ್ಲಿಯವರೆಗೆ ಎಷ್ಟು ಸೈಟುಗಳು ಹಂಚಿಕೆಯಾಗಿವೆ? ಎಂಬ ನಾನಾ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಹಾಗೂ ಪಾರ್ವತಿ ಸಿದ್ದರಾಮಯ್ಯ ಅವರ ಮೂಲ ದಾಖಲಾತಿಗಳನ್ನು ಅಂಕಿ ಅಂಶದ ಸಮೇತವಾಗಿ ಕೊಡಿ ಎಂದು ಕೇಳಿದ್ದಾರೆ. ಈ ವಿಚಾರವಾಗಿ ಮುಡಾದ ಆಯುಕ್ತರನ್ನು ಇಡಿ ಅಧಿಕಾರಿಗಳು ಕೇಳಿದ್ದು, ಅಧಿಕಾರಿಗಳ ತಂಡಕ್ಕೆ ಮುಡಾದ ಆಯುಕ್ತ ರಘುನಂದನ್ ವಿವರಣೆ ಕೊಡುತ್ತಿದ್ದಾರೆ.