ಪ್ರತಿನಿಧಿ ವರದಿ ಪೊನ್ನಂಪೇಟೆ
ತ್ಯಾಗರಾಜ ರಸ್ತೆಯಲ್ಲಿರುವ ಶಾಫಿ ಜುಮ್ಮಾ ಮಸೀದಿ, ಕಾಟ್ರಕೊಲ್ಲಿ ಮುಹಿಯುದ್ದೀನ್ ಜುಮ್ಮಾ ಮಸೀದಿ, ಮತ್ತು ಹನಫಿ ಜಾಮಿಯಾ ಮಸೀದಿಯ ಸಂಯುಕ್ತ ಆಶ್ರಯದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನಾಚರಣೆ ಪ್ರಯುಕ್ತ ಮಿಲಾದ್ ರ್ಯಾಲಿ ನಡೆಯಿತು.
ರಾಮಕೃಷ್ಣ ಶಾರದಾಶ್ರಮದ ಎದುರಿನಿಂದ ಆರಂಭಗೊಂಡ ಮಿಲಾದ್ ಜಾಥಾ ಮುಖ್ಯ ರಸ್ತೆಯ ಮೂಲಕ ಬಸ್ ನಿಲ್ದಾಣದವರೆಗೆ ಸಾಗಿತು. ನೂರಾರು ಮುಸ್ಲಿಂ ಬಾಂಧವರು ಜಾಥದಲ್ಲಿ ಪಾಲ್ಗೊಂಡಿದ್ದರು. ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ದಫ್ ಪ್ರದರ್ಶನ ನೀಡಿದರು. ಶಾಪಿ ಜುಮ್ಮಾ ಮಸೀದಿಯಲ್ಲಿ ಮದರಸ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶಾಫಿ ಜುಮ್ಮಾ ಮಸ್ಜಿದ್ ಅಧ್ಯಕ್ಷ ಸಿ.ಎ.ಅಹಮದ್, ಕಾರ್ಯದರ್ಶಿ ಪಿ.ಎ.ಅಜೀಜ್, ಉಪಾಧ್ಯಕ್ಷ ಸಿ.ಎಂ.ಅಶ್ರಫ್, ಕಾಟ್ರಕೊಲ್ಲಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಎಂ.ಎ.ಆಲಿ, ಕಾರ್ಯದರ್ಶಿ ಅನೀಫ್, ಹನಫಿ ಜುಮ್ಮಾ ಮಸೀದಿ ಅಧ್ಯಕ್ಷ ಎಂ.ಇ.ಫಾಜಿಲ್, ಕಾರ್ಯದರ್ಶಿ ಮೊಹಿಸಿನ್, ಮದರಸ ಧಾರ್ಮಿಕ ಗುರುಗಳಾದ ಜಿಯಾದ್ ದಾರಿಮಿ, ಹಿರಿಯರಾದ ಆಲೀರ ಎರ್ಮು ಹಾಜಿ, ಪಪಂ ಉಪಾಧ್ಯಕ್ಷ ಆಲೀರ ರಶೀದ್, ಸದಸ್ಯ ಜುನೈದ್, ಅಜೀಜ್, ಕಾರ್ಯಕ್ರಮ ಸಂಚಾಲಕ ವಿ.ಎಚ್.ಆಲಿ, ಇದ್ದರು.
ಫೋಟೋ 18 ಎಂಡಿಕೆ 02 ; ಪೊನ್ನಂಪೇಟೆಯಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನಾಚರಣೆ ಪ್ರಯುಕ್ತ ಮಿಲಾದ್ ರ್ಯಾಲಿ ನಡೆಯಿತು.