ಮಡಿಕೇರಿ: ಕುಶಾಲನಗರ 220/11 ಕೆವಿ ಮತ್ತು 66/11 ಕೆವಿ ಸುಂಟಿಕೊಪ್ಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಹಿನ್ನೆಲೆ ಜೂ.3 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗುವುದು.
ಕುಶಾಲನಗರ ಪಟ್ಟಣ, ಹೆಬ್ಬಾಲೆ ಶಿರಂಗಾಲ, ಕೂಡಿಗೆ, ರಸಲ್ಪುರ, ಭುವನಗಿರಿ, ಬಲಮುರಿ, ಹಾರಂಗಿ, ನಂಜರಾಯಪಟ್ಟಣ, ಎಸ್.ಎಲ್.ಎನ್, ಸಿದ್ದಲಿಂಗಪುರ ಕಾವೇರಿ ನಿಸರ್ಗಧಾಮ, ಸೋಮೇಶ್ವರ, ಕೂಡುಮಂಗಳೂರು, ನಾಕೂರು, ಮಾದಾಪುರ, ಹಟ್ಟಿಹೊಳೆ, ಕಾಂಡನಕೊಲ್ಲಿ, ಗರ್ವಾಲೆ, ಬಿಳಿಗೇರಿ, ಕಂಬಿಬಾಣೆ, ಕೊಡಗರಹಳ್ಳಿ, ಉಪ್ಪುತೋಡು, ಚೆಟ್ಟಳ್ಳಿ, ಶಿರಂಗಾಲ, ವಾಲ್ನೂರು ತ್ಯಾಗತ್ತೂರು, ಮತ್ತಿಕಾಡು, ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಇಇ ಅನಿತಾ ಬಾಯಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.