ವಿವೇಕನಂದಾ ಶಿಕ್ಷಣ ಸಂಸ್ಥೆಯ ಧರ್ಮದರ್ಶಿ ಎಂ.ಪ್ರಕಾಶ್ ಮಾಹಿತಿ
ಪ್ರತಿನಿಧಿ ವರದಿ ಬನ್ನೂರು
ಮಾನವನಿಗೆ ಎಲ್ಲ ಅಂಗಗಳಲ್ಲಿ ಕಣ್ಣು ಅತಿ ಮುಖ್ಯವಾದ ಅಂಗವಾಗಿದ್ದು, ಕಣ್ಣಿನಿಂದ ಮಾತ್ರ ಆತ ಈ ಪ್ರಪಂಚದ ಅರಿವು ಮೂಡಲು ಸಾಧ್ಯ ಎಂದು ವಿವೇಕನಂದಾ ಶಿಕ್ಷಣ ಸಂಸ್ಥೆಯ ಧರ್ಮದರ್ಶಿ ಎಂ.ಪ್ರಕಾಶ್ ತಿಳಿಸಿದರು.
ಪಟ್ಟಣದ ರೋಟರಿ ಸಂಸ್ಥೆ, ಕಾನ್ಸಿಂಗ್ಜೀ ರಾಜ್ಪುರೋಹಿತ್, ಶ್ರೀ ಗೌರಿದೇವಿ, ಲಯನ್ಸ್ ಕ್ಲಬ್ ಆಫ್ ಈರೋಡ್ ಸುಪ್ರಿಮ್, ಕೊಯಮತ್ತೂರು ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಉದ್ಘಟಿಸಿ ಮಾತನಾಡಿದರು.
ಪಟ್ಟಣದಲ್ಲಿ ಈ ರೀತಿಯ ಸೇವಾ ಕಾರ್ಯವನ್ನು ನಿರಂತರವಾಗಿ ಪ್ರತಿ ತಿಂಗಳ 2ನೇ ಶನಿವಾರದಂದು ಜನರಿಗೆ ಸಿಗುವಂತೆ ಮಾಡಿರುವುದು ತುಂಬಾ ಶ್ಲಾಘನೀಯ. ಗ್ರಾಮಾಂತರ ಪ್ರದೇಶ ಸೇರಿದಂತೆ ವಿವಿಧ ಸ್ಥಳದಿಂದ ಜನರು ಆಗಮಿಸಿ ತಮ್ಮ ಕಣ್ಣಿನ ದೋಷ ಪರಿಹರಿಸಿಕೊಳ್ಳುವ ಮೂಲಕ ಇಂತಹ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.
ಮಾಜಿ ರೋಟರಿ ಅಧ್ಯಕ್ಷ ಡಾ.ಮಹೇಂದ್ರಸಿಂಗ್ಕಾಳಪ್ಪ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಕಣ್ಣಿನ ತಪಾಸಣೆಗಾಗಿ ನಗರ ಪ್ರದೇಶವನ್ನು ಅಶ್ರಯಿಸಿ ಹೋಗಲು ಸಾಮಾನ್ಯ ಜನರಿಗೆ ತುಂಬಾ ಹಣ ವ್ಯಯವಾಗುತ್ತಿದ್ದರಿಂದ ಎಷ್ಟೋ ಮಂದಿ ತಮ್ಮ ಜೀವನವನ್ನು ಅಂದತ್ವದಲ್ಲಿ ಕಳೆಯುತ್ತಿದ್ದದ್ದನ್ನು ಗಮನಿಸಿದ್ದೆ, ಹೀಗಾಗಿ ಈ ತರಹದ ಸೇವಾ ಕಾರ್ಯವನ್ನು ರೋಟರಿ ಸಂಸ್ಥೆಯ ಸಹಯೋಗದಲ್ಲಿ ಮಾಡುತ್ತಿದ್ದೇನೆ. ಈ ಕಾರ್ಯಕ್ರಮಕ್ಕೆ ಉತ್ತಮ ಬೆಂಬಲ ದೊರೆತಿದ್ದು, ಸುತ್ತಮುತ್ತಲ ಗ್ರಾಮದಿಂದ 100ಕ್ಕೂ ಹೆಚ್ಚು ಜನ ಆಗಮಿಸಿ ಕಣ್ಣಿನ ತಪಾಸಣೆ ಮಾಡಿಸಿಕೊಂಡಿರುವುದಲ್ಲದೇ, 25 ಜನರು ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ. ಅವರನ್ನು ನಮ್ಮದೇ ಸ್ವಂತ ಖರ್ಚಿನಲ್ಲಿ ಕೊಯಮತ್ತೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಪುನಃ ಅದೇ ಸ್ಥಳಕ್ಕೆ ತಂದು ಬಿಡಲಾಗುವುದು ಎಂದು ಹೇಳಿದರು.
ವಿವೇಕನಂದಾ ಶಿಕ್ಷಣ ಸಂಸ್ಥೆ ಕೆ.ರಾಜೇಶ್ಕುಮಾರ್, ರೋಟರಿ ಸಂಸ್ಥೆ ಅಧ್ಯಕ್ಷ ಬಸವನಹಳ್ಳಿ ವೆಂಕಟೇಶ್, ಕಾರ್ಯದರ್ಶಿ ಸಿ.ರಾಜು, ಬಿ.ಎಸ್.ಯೋಗೇಂದ್ರ, ಪಾರ್ಥಸಾರಥಿ, ಹನುಮಂತೇಗೌಡ, ಸ್ಟುಡಿಯೋ ಮುರಳಿ, ಗೌರಿದೇವಿ, ವಿರಾಟ್ ಸಿಂಗ್, ವನ್ಯಸಿಂಗ್, ರಾಜೇಶ್ಕುಮಾರ್, ಮಾಣಿಕ್ಚಂದ್, ಮೇಲ್ವಿಚಾರಕ ವಿಜಯ ಕುಮಾರ್, ವೈದ್ಯ ಅಪರ್ಜಿತ್, ಮುಕ್ತ ಸೇರಿದಂತೆ ಹಲವರು ಉಪಸ್ಥಿತರಿಸಿದ್ದರು.
5 ಬನ್ನೂರು 1: ಬನ್ನೂರಿನಲ್ಲಿ ಶನಿವಾರ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.