ಮಾಲೂರು: ನಿವೃತ್ತಿ ಹೊಂದಿದ ಮಾಸ್ತಿ ಸಂಕೀರ್ಣದ ಸರ್ಕಾರಿ ಕಿರಿಯ ಪ್ರಥಾಮಿಕ ಶಾಲೆ ಗಂಗಸಂದ್ರದ ಸಹ ಶಿಕ್ಷಕ ಎನ್.ಜಿ.ನಾಗರಾಜ್ ಹಾಗೂ ಕೆ.ಜಿ.ಹಳ್ಳಿ ಸಂಕೀರ್ಣದ ಸಹ ಶಿಕ್ಷಕ ವಿ.ವೆಂಕಟೇಶಪ್ಪ ಅವರನ್ನು ಮಾಲೂರು ತಾಲೂಕು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ಚಂದ್ರಕಲಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖಯ್ಯ, ಪ್ರಧಾನ ಕಾರ್ಯದರ್ಶಿ ರಮೇಶ್, ಖಜಾಂಚಿ ಅರ್ಜುನ, ಉಪಾಧ್ಯಕ್ಷ ಭಗವತ ಸಿಂಗ್, ಮಹಿಳಾ ಉಪಾಧ್ಯಕ್ಷೆ ರಾಜೇಶ್ವರಿ, ಸಂಘಟನಾ ಕಾರ್ಯದರ್ಶಿ ಚನ್ನಪ್ಪ, ಕ್ಷೇತ್ರ ಸಮನ್ವಯಾಧಿಕಾರಿ, ನಂಜುಂಡ ಗೌಡ, ಶಿಕ್ಷಣ ಸಂಯೋಜಕ ಬಾಬಾ ಜಾನ್, ಜಗದಾಂಬ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಯ್ಯ, ಪದಾಧಿಕಾರಿಗಳು ಉಪಸ್ಥಿತರಿದ್ದರು.