- ಪ್ರತಿನಿಧಿ ವರದಿ ಕೋಲಾರ
ರೈತರ ಸಮಸ್ಯೆಗಳಿಗೆ ಸ್ಪಂದಿಸದ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ಹದಗೆಟ್ಟಿರುವ ಜಿಲ್ಲಾಡಳಿತವನ್ನು ಸರಿಪಡಿಸಿ ನಕಲಿ ಬಿತ್ತನೆ ಟೊಮೊಟೊ ಬೀಜ ಹಾಗೂ ಮುಂಗಾರು ಮಳೆಯಿಂದ ನಷ್ಟವಾಗಿರುವ ಪ್ರತಿ ಎಕರೆಗೆ ೫ ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿ ಮೇ.೩೦ರಂದು ನಷ್ಟ ಬೆಳೆ ಸಮೇತ ಮುಖ್ಯಮಂತ್ರಿಯ ಮನೆ ಮುಂದೆ ಹೋರಾಟ ಮಾಡುವುದಾಗಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಪತ್ರಿಕಾ ಹೇಳಿಕೆ ಮುಖಾಂತರ ಎಚ್ಚರಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ೪೮ ಗಂಟೆಯಲ್ಲಿ ಜಿಲ್ಲೆಯ ರೈತರ ಸಮಸ್ಯೆಗಳಿಗೆ ಸ್ಪಂದಿಸದ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ. ಹದಗೆಟ್ಟಿರುವ ಜಿಲ್ಲಾಡಳಿತವನ್ನು ಸರಿಪಡಿಸಿ. ನಕಲಿ ಬಿತ್ತನೆ ಟೊಮೋಟೊ ಬೀಜ ಹಾಗೂ ಮುಂಗಾರು ಮಳೆಯಿಂದ ನಷ್ಟವಾಗಿರುವ ಪ್ರತಿ ಎಕರೆಗೆ ೫ ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿ ಮೇ.೩೦ರಂದು ನಷ್ಟ ಬೆಳೆ ಸಮೇತ ಮುಖ್ಯಮಂತ್ರಿಗಳ ಮನೆ ಮುಂದೆ ಹೋರಾಟ ಮಾಡುವುದಾಗಿ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಗಿದೆ.
ಮರಗಲ್ ಶ್ರೀನಿವಾಸ್, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಸುಪ್ರೀಂ ಚಲ, ಶೈಲಜ, ರಾಧ, ಮುನಿರತ್ನ, ಶೋಭ, ಸುಗುಣ, ಗೋವಿಂದಪ್ಪ, ಮುಂತಾದವರಿದ್ದರು.