ಪಿಎಂ ಮೋದಿ ಆಡಳಿತದ ಮೂರನೇ ಅವಧಿಯ ಮೊದಲ ಬಜೆಟ್ ಮಂಡನೆಯಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಟ್ಯಾಬ್ಲೆಟ್ ಬ್ಯಾಗ್ ಹಿಡಿದು ಸಂಸತ್ತಿಗೆ ಆಗಮಿಸಿ, ಆಯವ್ಯಯ ಮಂಡನೆ ಮಾಡ್ತಿದ್ದಾರೆ.ಈ ಬಾರಿಯ ಬಜೆಟ್ ನಲ್ಲಿ ಶ್ವೇತ ವರ್ಣದ ಸೀರಯನ್ನುಟ್ಟು ಕಂಗೊಳಿಸಿದ್ದಾರೆ ಸಚಿವೆ ನಿರ್ಮಲಾ ಸೀತಾರಾಮನ್. ಪ್ರತಿ ಬಾರಿ ಬಜೆಟ್ ಮಂಡನೆಯಲ್ಲಿಯೂ ಸೀತಾರಾಮನ್ ಅವರು ಧರಿಸುವ ಸೀರೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ.
‘ವೈಟ್ ಸ್ಯಾರಿ’ಯಲ್ಲಿ ಮಿಂಚಿಂಗ್..
ಪ್ರತಿ ಬಾರಿಯ ಬಜೆಟ್ ಮಂಡನೆಗೆ ನಿರ್ಮಲಾ ಅವರು ಧರಿಸುವ ಸೀರೆಯು ಅದರ ವಿಶಿಷ್ಟತೆಗಳಿಂದ ಎಲ್ಲರ ಗಮನ ಸೆಳೆಯುವುದಂತೂ ನಿಜ. ಈ ಬಾರಿ ನಿರ್ಮಲ ಅವರು ಸತತ 7 ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದು, ಇದು ದಾಖಲೆ ಮುರಿಯುವ ಬಜೆಟ್ ಆಗಿದೆ. ಈ ಬಾರಿಯ ಬಜೆಟ್ ನಿರ್ಮಲಾ ಅವರಿಗೆ ವಿಶೇಷ ಅಂತಲೇ ಹೇಳಬಹುದು. ಶಾಂತಿ ಅಥವಾ ಸ್ವಾಮ್ಯತೆಯ ಪ್ರತೀಕವಾದಂತಹ ಶ್ವೇತ ವರ್ಣದ ರೇಷ್ಮೆ ಸೀರೆಯನ್ನ ಇವರು ಧರಿಸಿದ್ದಾರೆ. ಈ ಸೀರೆಗೆ ಸ್ವರ್ಣ ಬಣ್ಣ ಮಿಶ್ರಿತ ಮೆಜೆಂತಾ ಬಾರ್ಡರ್ ಇದ್ದು, ಗೋಲ್ಡನ್ ಬಣ್ಣದ ಚೌಕಾಕಾರದ ಡಿಸೈನ್ ಸೀರೆಯ ಒಡಲಿಗಿದೆ.ಆಫ್ ವೈಟ್ ಮತ್ತು ಮೆಜೆಂಟಾ ಬಾರ್ಡರ್ ಇರುವ ರೇಷ್ಮೆ ಕೈಮಗ್ಗ ಸೀರೆ ಇದಾಗಿದೆ.
ತಮ್ಮ 5ನೇ ಬಜೆಟ್ ಮಂಡನೆಗೆ ಧಾರವಾಡದ ನವಲಗುಂದದ ಕಸೂತಿ ಸೀರೆಯನ್ನ ನಿರ್ಮಲಾ ಅವರು ತೊಟ್ಟಿದ್ದರು. ಇದಲ್ಲದೆ ಮಂಗಳಗಿರಿ ಸೀರೆ ಹಾಗೂ ಪೋಚಂಪಲ್ಲಿ ಸೀರೆಗಳನ್ನು ಉಟ್ಟು ಬಜೆಟ್ ಮಂಡಿಸುವ ಮೂಲಕ ಪ್ರತಿ ಬಾರಿಯೂ ಸಣ್ಣ ಕೈಗಾರಿಕೆಗಳಿಗೆ ವಿತ್ತ ಸಚಿವೆ ನಿರ್ಮಲಾ ಅವರು ಉತ್ತೇಜನ ನೀಡುತ್ತಿದ್ದಾರೆ. ಮಧ್ಯಮ ವರ್ಗ ಕ್ಕೆ ತೀರ ಹತ್ತಿರ ಎಂಬಂತೆ ಬಜೆಟ್ ಮಂಡಿಸಲಾಗುವುದು ಅಂತ ನಿರ್ಮಲ ಹೇಳಿಕೊಂಡಿದ್ದರು. ಸ್ವಭಾವದಲ್ಲೂ ಸರಳತೆ ಮೆರೆದು ನಿರ್ಮಲಾ ಎಲ್ಲರಿಂದ ಶಹಬ್ಬಾಸ್ ಅನಿಸಿಕೊಂಡಿದ್ದಾರೆ.
ಕೃಷಿ ಕ್ಷೇತ್ರಕ್ಕೆ 1.5 ಲಕ್ಷ ಕೋಟಿ ಘೋಷಣೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2024-25ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡುತ್ತಿದ್ದು ರೈತರು ಮತ್ತು ಕೃಷಿ ಕ್ಷೇತ್ರಕ್ಕೆ ಬಜೆಟ್ ನಲ್ಲಿ 1.5 ಲಕ್ಷ ಕೋಟಿ ರೂ. ಘೋಷಣೆ ಮಾಡಿದ್ದಾರೆ.
ರೈತರು ಮತ್ತು ಕೃಷಿ ಕ್ಷೇತ್ರಕ್ಕೆ ಬಜೆಟ್ನಲ್ಲಿ 1.52 ಲಕ್ಷ ಕೋಟಿ ರೂ. ಘೋಷಣೆ ಮಾಡಲಾಗಿದೆ. ಈ ನಿಧಿಯಿಂದ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ಯೋಜನೆಗಳನ್ನು ರೂಪಿಸಲಾಗುವುದು. ಮುಂದಿನ ಒಂದು ವರ್ಷದಲ್ಲಿ 1 ಕೋಟಿ ರೈತರನ್ನು ನೈಸರ್ಗಿಕ ಕೃಷಿ ವ್ಯಾಪ್ತಿಗೆ ತರಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.