ಪ್ರತಿನಿಧಿ ವರದಿ ಕನಕಪುರ
ವ್ಯಕ್ತಿ ಮೇಲೆ ಹಲ್ಲೆ ಮಾಡಿದ ನಾಲ್ವರು ಆರೋಪಿಗಳ ವಿರುದ್ಧ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ತಾಲೂಕಿನ ಕೋಡಿಹಳ್ಳಿ ಗ್ರಾಮದ ಕಿರಣ್ ಕುಮಾರ್ ಹಲ್ಲೆಗೊಳಗಾದ ವ್ಯಕ್ತಿ. ಕನಕಪುರ ನಗರದ ಚಂದ್ರಮೌಳಿ, ಕಣ್ಣ, ಬೊಮ್ಮ, ಲಿಂಗಪ್ಪ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಜೂ.9 ರಂದು ಹಲ್ಲೆಗೊಳಗಾದ ಕಿರಣ್ ಕುಮಾರ್ ಮತ್ತು ಆತನ ಸ್ನೇಹಿತರಾದ ಮಲ್ಲಿಕಾರ್ಜುನ್ ಮತ್ತು ಮಧು, ಮೂವರು ಮೈಸೂರು ರಸ್ತೆಯಲ್ಲಿರುವ ವೈಶಾಲಿ ಕಂಪಾರ್ಟ್ ಹೋಟೆಲ್ ಬಳಿ ಬಾರ್ ಕೌಂಟರ್ ನಲ್ಲಿ ಮದ್ಯ ಖರೀದಿ ಮಾಡುವಾಗ ಜಗಳ ಶುರುವಾಗಿ ಆರೋಪಿಗಳು ಮಲ್ಲಿಕಾರ್ಜುನ್ ಎಂಬುವರ ಮೇಲೆ ಹಲ್ಲೆ ಮಾಡಿದ್ದರು. ಮಲ್ಲಿಕಾರ್ಜುನ್ ಅವರನ್ನು ರಕ್ಷಣೆ ಮಾಡಲು ಹೋದ ಕಿರಣ್ಕುಮಾರ್ ಮೇಲೂ ಆರೋಪಿಗಳು ಹಲ್ಲೆ ಮಾಡಿ ಅಟ್ಟಾಡಿಸಿ ಕಾಲಿನಿಂದ ಒದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಾಟಲ್ನಿಂದ ಒಡೆಯಲು ಪ್ರಯತ್ನಿಸಿದ್ದಾರೆ.
ಹಲ್ಲೆ ಹಿನ್ನೆಲೆಯಲ್ಲಿ ಕಿರಣ್ ಕುಮಾರ್ ನಾಲ್ವರು ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನಗರ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಆದರೆ ಗಲಾಟೆಗೆ ನಿಖರವಾದ ಕಾರಣ ಏನು ಎಂದು ಮಾತ್ರ ದೂರಿನಲ್ಲಿ ದೂರುದಾರರು ಹೇಳಿಕೊಂಡಿಲ್ಲ. ಈ ಸಂಬಂಧ ನಗರ ಠಾಣೆಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.